'ರನ್ ಆಂಟನಿ' ಚಿತ್ರತಂಡ 
ಸಿನಿಮಾ ಸುದ್ದಿ

'ರನ್ ಆಂಟನಿ' ಚಿತ್ರೀಕರಣ ಮುಕ್ತಾಯ

ರನ್ ಆಂಟನಿ' ಮೂಲಕ ನಿರ್ದೇಶನಕ್ಕೆ ಇಳಿದಿರುವ ರಘು ಶಾಸ್ತ್ರಿ ನಿಗದಿತ ಸಮಯಕ್ಕೆ ವಿನಯ್ ರಾಜಕುಮಾರ್ ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿಸಿ ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು: 'ರನ್ ಆಂಟನಿ' ಮೂಲಕ ನಿರ್ದೇಶನಕ್ಕೆ ಇಳಿದಿರುವ ರಘು ಶಾಸ್ತ್ರಿ ನಿಗದಿತ ಸಮಯಕ್ಕೆ ವಿನಯ್ ರಾಜಕುಮಾರ್ ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿಸಿ ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಭಾಗಗಳ ಚಿತ್ರೀಕರಣವನ್ನು ಮತ್ತೆ ಚಿತ್ರಿಸಲು ಅವರು ತೆಗೆದುಕೊಂಡಿದ್ದು ಕೇವಲ ಮೂರು ಹೆಚ್ಚುವರಿ ದಿನಗಳು. ಈಗ ಡಬ್ಬಿಂಗ್ ಮತ್ತು ಸಂಕಲನ ಕಾರ್ಯ ಪ್ರಗತಿಯಲ್ಲಿದೆ.

ಡಿಸೆಂಬರ್ ೧೪ ರಂದು ಸೆಟ್ಟೇರಿದ ಈ ಸಿನೆಮಾಗೆ ಡಿಸೆಂಬರ್ ೨೯ ರಿಂದ ಚಿತ್ರೀಕರಣ ಪ್ರಾರಂಭವಾಗಿತ್ತು. ಮೇ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿತ್ತು. "ನಾನು ಮುಂದೆ ೧೦೦ ಸಿನೆಮಾ ಮಾಡಿದರೂ ಮೊದಲನೆಯ ಸಿನೆಮಾ ನೆನಪಿನಲ್ಲಿ ಉಳಿಯುವಂತದ್ದು. ಚಿತ್ರೀಕರಣ ಪೂರ್ಣಗೊಂದಿದ್ದರೂ ಭಾವನಾತ್ಮಕವಾಗಿ ಚಿತ್ರತಂಡ ಒಟ್ಟಿಗೇ ಇದೆ. ೫೫ ದಿನಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿದ್ದೆವು, ಸ್ವಲ್ಪ ಕಾಲ ಮುಂದುವರೆಯಿತು. ಕೊನೆಯ ದಿನ ಎಲ್ಲರೂ ಎಮೋಷನಲ್ ಆಗಿದ್ದೆವು" ಎಂದು ನೆನಪಿಸಿಕೊಳ್ಳುತ್ತಾರೆ ರಘು.

ಸಿನೆಮಾ ಚಿತ್ರೀಕರಣ ಸಂಪೂರ್ಣಗೊಳ್ಳುವುದಕ್ಕೆ ಪೂರ್ಣ ಸಹಕಾರ ನೀಡಿದ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ನೆನಪಿಸಿಕೊಳ್ಳುವ ನಿರ್ದೇಶಕ "ಸಿನೆಮಾ ನಿರ್ದೇಶಿಸುವುದಕ್ಕಿಂತಲೂ, ಈ ನಿರ್ಮಾಣ ಸಂಸ್ಥೆ ನನಗೆ ನೀಡಿದ ಗೌರವ ನನಗೆ ಹೆಚ್ಚು ಸಂತಸ ತಂದಿತು. ಇದು ನನ್ನ ಮೊದಲನೆಯ ಚಿತ್ರ ಎಂಬಂತೆ ಕಾಣಲೇ ಇಲ್ಲ ನನ್ನನ್ನು. ಈ ಬ್ಯಾನರ್ ಅಡಿ ಕೆಲಸ ಮಾಡಿದ್ದಕ್ಕೆ ನಾನು ಅವರಿಗೆ ಆಭಾರಿ" ಎನ್ನುತ್ತಾರೆ ರಘು.

ರಘು ಅವರೇ ಕಥೆ ರಚಿಸಿರುವ 'ರನ್ ಆಂಟನಿ' ಆಕ್ಷನ್-ಥ್ರಿಲ್ಲರ್ ಚಿತ್ರ. ನಾಯಕ ನಟಿಯರಾಗಿ ರುಕ್ಷಾರ್ ಮೀರ್ ನಟಿಸಿದ್ದಾರೆ. ಸುಶ್ಮಿತಾ ಜೋಶಿ, ದೇವರಾಜ್, ಬುಲೆಟ್ ಪ್ರಕಾಶ್ ಕೂಡ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT