'ಉಪ್ಪು ಹುಳಿ ಖಾರ' ಸಿನೆಮಾಗೆ ಕ್ಲ್ಯಾಪ್ ಮಾಡಿದ ಲೇಖಕಿ ಸುಧಾ ಮೂರ್ತಿ 
ಸಿನಿಮಾ ಸುದ್ದಿ

'ಉಪ್ಪು ಹುಳಿ ಖಾರ' ದಲ್ಲಿ ಮೂರು 'ಶ್ರೀ'ಗಳನ್ನು ನಿರ್ದೇಶಿಸಲಿರುವ ಇಮ್ರಾನ್

ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ.

ಬೆಂಗಳೂರು: ನೃತ್ಯ ನಿರ್ದೇಶಕನಿಂದ ನಿರ್ದೇಶಕನಾಗಿ ಭಡ್ತಿ ಪಡೆದು 'ಎಂದೆಂದಿಗೂ' ನಿರ್ದೇಶಿಸಿದ್ದ ಇಮ್ರಾನ್ ಸರ್ದಾರಿಯಾ ಈಗ ತಮ್ಮ ಎರಡನೆ ಚಿತ್ರ 'ಉಪ್ಪು ಹುಳಿ ಖಾರ'ಕ್ಕೆ ಅಣಿಯಾಗಿದ್ದಾರೆ. ಭಾನುವಾರ ಇದಕ್ಕೆ ಮುಹೂರ್ತ ನೆರವೇರಿದ್ದು ಇಂದಿನಿಂದ ಚಿತ್ರೀಕರಣ ಪ್ರಾಂಭವಾಗಲಿದೆ. ಎಂ ರಮೇಶ್ ರೆಡ್ಡಿ ಸಿನೆಮಾದ ನಿರ್ಮಾಪಕ.

ಸಿನೆಮಾಗೆ ಲೇಖಕಿ ಸುಧಾ ಮೂರ್ತಿ ಕ್ಲ್ಯಾಪ್ ಮಾಡಿದ್ದು, ಇಡಿ ಚಿತ್ರತಂಡ ಬನಶಂಕರಿ ದೇವಸ್ಥಾನದಲ್ಲಿ ನೆರೆದಿತ್ತು. "ಮೂರು 'ಶ್ರೀ'ಗಳು ಸಿನೆಮಾದಲ್ಲಿರುವುದು ನನಗೆ ಖುಷಿ ತಂದಿದೆ - ಮಾಲಾಶ್ರೀ, ಅನುಶ್ರೀ ಮತ್ತು ಜಯಶ್ರೀ" ಎನ್ನುತ್ತಾರೆ ನಿರ್ದೇಶಕ ಇಮ್ರಾನ್.

ಈ ಹಿಂದೆ ಹಾಸ್ಯ-ಹಾರರ್ ಮಿಶ್ರಣದ ಚಿತ್ರ ನೀಡಿದ್ದ ನಿರ್ದೇಶಕ ಇದು ಕೂಡ ಕಾಮಿಡಿ ಚಿತ್ರವಾಗಿರಲಿದೆ ಎನ್ನುತ್ತಾರೆ "ನಾನು ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಬೇಕೆಂದಿದ್ದೆ, ಆದರೆ ವಿಭಿನ್ನವಾದ ಡಾರ್ಕ್ ಕಾಮಿಡಿ ಮಾಡಿದೆ. ಈಗ ನಾನು ಸಮಾಜದಲ್ಲಿ ನೋಡಿರುವ ನಿಜ ಜೀವನದ ಪಾತ್ರಗಳನ್ನು ತೆರೆಗೆ ತರಲಿದ್ದೇನೆ. ಹಾಗೆ ಯುವಕರು ಸಿನೆಮಾವನ್ನು ಆಸ್ವಾದಿಸಬಹುದು" ಎನ್ನುತ್ತಾರೆ.

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT