ಬೆಂಗಳೂರು: ಮರಾಠಿ ಕಾದಂಬರಿ 'ದುನಿಯಾದ್ರಿ'ಯ ಅದೇ ಹೆಸರಿನ ಕನ್ನಡ ಸಿನೆಮಾ ಅವತರಿಣಿಕೆಯ ಭಾಗವಾಗಲು ಒಪ್ಪಿಕೊಂಡಿರುವ ನಟ ಚೇತನ್ ಈ ವರ್ಷ ಎರಡನೇ ಸಿನೆಮಾ ಕೂಡ ಒಪ್ಪಿಕೊಂಡಿದ್ದಾರೆ.
'ಆಕಾಶ್' ಮತ್ತು 'ಅರಸು' ಖ್ಯಾತಿಯ ಮಹೇಶ್ ಬಾಬು ನಿರ್ದೇಶಿಸುತ್ತಿರುವ ಇನ್ನು ಹೆಸರಿಡದ ಈ ಚಿತ್ರದಲ್ಲಿ ಚೇತನ್ ನಟಿಸುತ್ತಿರುವುದನ್ನು ಧೃಢೀಕರಿಸುವ ನಿರ್ದೇಶಕ "ಒಳ್ಳೆಯ ಕಮರ್ಶಿಯಲ್ ನಟನಾಗುವ ಗುಣಗಳಿರುವ ನಟ ಚೇತನ್ ಆದರೆ ಅವರು ವಿಷಯ ಆಯ್ಕೆಗಳ ಬಗ್ಗೆ ಬಹಳ ಎಚ್ಚರಿಕೆಯಂದಿರುತ್ತಾರೆ. ಈ ಸಿನೆಮಾ ಒಪ್ಪಿಕೊಳ್ಳುವುದಕ್ಕೂ ಮುಂಚಿತವಾಗಿ ನಟ ನಮ್ಮ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆಸಿದರು" ಎನ್ನುತ್ತಾರೆ.
ಸಾಮಾಜಿಕ ಆಯಾಮವಿರುವ ಈ ಸಿನೆಮಾದಲ್ಲಿ ಚೇತನ್ ಟಿವಿ ವಾಹಿನಿಯ ವರದಿಗಾರನಿಗೆ ನಟಿಸುತ್ತಿರುವುದು ಆಸಕ್ತಿದಾಯಕ. "ಆಗತಾನೆ ಕಾಲೇಜಿನಿಂದ ಹೊರಬಂದವರಂತೆ ಕಾಣುವ ನಟ ನಮಗೆ ಬೇಕಿತ್ತು" ಎನ್ನುವ ಮಹೇಶ್ "ಅಲ್ಲದೆ ಚೇತನ್ ಪ್ರೇಕ್ಷಕರಿಗೆ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲರು" ಎಂದಿದ್ದಾರೆ.
ಪ್ರಕಾಶ್, ಪ್ರೇಮ್ ಮತ್ತು ವೇಣು ನಿರ್ಮಿಸುತ್ತಿರುವ ಈ ಸಿನೆಮಾ ಅಕ್ಟೋಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ವರ್ಷದ ಹಿಂದೆ 'ಮೈನಾ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಚೇತನ್ ದೀರ್ಘ ಕಾಲದವರೆಗೆ ಸಿನೆಮಾಗಳಿಂದ ದೂರವಿದ್ದರು.
ಈ ಮಧ್ಯೆ ದಿಲೀಪ್ ಪ್ರಕಾಶ್ ಮತ್ತು ಆಶಿಕಾ ರಂಗನಾಥ್ ನಟಿಸಿರುವ 'ಕ್ರೇಜಿ ಬಾಯ್' ಬಿಡುಗಡೆಗೆ ಮಹೇಶ್ ಮುಂದಾಗಿದ್ದಾರೆ. "ಈ ಸಿನೆಮಾ ಬಹುಷಃ ಆಗಸ್ಟ್ 19 ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos