ಭಜರಂಗಿ ಲೋಕಿ 
ಸಿನಿಮಾ ಸುದ್ದಿ

ಜಾಗ್ವಾರ್ ಮೂಲಕ ತೆಲುಗಿಗೆ ಹಾರಿದ ಭಜರಂಗಿ ಲೋಕಿ

ಇತ್ತೀಚಿನ ಕನ್ನಡದ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನಲ್ಲಿ ಸರ್ವೋತ್ಕೃಷ್ಟ ಕೆಟ್ಟ ವ್ಯಕ್ತಿ(ವಿಲನ್) ಎಂದು ವಸಿಷ್ಠ ಸಿಂಹನನ್ನು...

ಇತ್ತೀಚಿನ ಕನ್ನಡದ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನಲ್ಲಿ ಸರ್ವೋತ್ಕೃಷ್ಟ ಕೆಟ್ಟ ವ್ಯಕ್ತಿ(ವಿಲನ್) ಎಂದು ವಸಿಷ್ಠ ಸಿಂಹನನ್ನು ವ್ಯಾಖ್ಯಾನಿಸಲಾದರೆ ಅಷ್ಟೇ ಭೀತಿ ಮತ್ತೊಬ್ಬ ವಿಲನ್ ನನ್ನು ನೋಡಿದರೆ ಆಗುತ್ತದೆ. ಲೋಕೇಶ್ ಅಲಿಯಾಸ್ ಭಜರಂಗಿ ಲೋಕಿ. ಭಜರಂಗಿ ಮೂಲಕ ಖ್ಯಾತರಾದ ಯವ ವಿಲನ್ ಲೋಕೇಶ್.
ಲೋಕೇಶ್ ರಥಾವರ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅವರ ಮುಂದಿನ ಸಿನಿಮಾ ಜಾಗ್ವರ್. ಕನ್ನಡ ಮತ್ತು ತೆಲುಗು ಅವತರಣಿಕೆಯಲ್ಲಿ ಜಗಪತಿ ಬಾಬು ಮತ್ತು ಸಂಪತ್ ಕುಮಾರ್ ಅವರೊಂದಿಗೆ ನಟಿಸುತ್ತಿದ್ದಾರೆ. 
ಜಾಗ್ವಾರ್ ತೆಲುಗು ಸಿನಿಮಾದಲ್ಲಿ ಸಂಪತ್ ಮುಖ್ಯ ವಿಲನ್ ಆಗಿ ನಟಿಸುತ್ತಿದ್ದರೆ, ಹೀರೋ ನಿಖಿಲ್ ಕುಮಾರ್ ಗೆ ಸವಾಲೊಡ್ಡುವ ಪಾತ್ರದಲ್ಲಿ ಲೋಕಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮ್ಮ ವೃತ್ತಿ ಜೀವನದಲ್ಲಿ ಬಹುಮುಖ್ಯ ಪಾತ್ರವಾಗಲಿದೆ ಎಂದು ಲೋಕಿ ನಂಬಿದ್ದಾರೆ.
ಇನ್ನು ಕನ್ನಡದ ರಾಜ್ -ವಿಷ್ಣು ಚಿತ್ರದಲ್ಲಿ ಶರಣ್ ಮತ್ತು ಚಿಕ್ಕಣ್ಣ ಜೊತೆ ಲೋಕಿ ಅಭಿನಯಿಸುತ್ತಿದ್ದು, ಇದು ತಮಿಳಿನ ರಜಿನಿ ಮುರುಗನ್ ಚಿತ್ರದ ರಿಮೇಕ್ ಆಗಿದೆ. ಅದರಲ್ಲಿ ಸಮುತಿರಕನಿ ಅಭಿನಯಿಸಿದ ಪಾತ್ರದಲ್ಲಿ ಲೋಕಿ ಅಭಿನಯಿಸುತ್ತಿದ್ದಾರೆ.
''ಇತ್ತೀಚಿನ ದಿನಗಳಲ್ಲಿ ವಿಲನ್ ಗಳಿಗೂ ಚಿತ್ರಗಳಲ್ಲಿ ಸಮಾನ ಅವಕಾಶ, ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ನನಗೆ ವಿಲನ್ ಆಗಿ ಅಭಿನಯಿಸುವಾಗ ದೊಡ್ಡ ಜವಾಬ್ದಾರಿಯಿದೆ. ಈ ಎರಡು ಚಿತ್ರಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಮುಂದಿನ ಹೆಜ್ಜೆ ಇಡುವುದಾಗಿ ಲೋಕಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT