ಸಿನಿಮಾ ಸುದ್ದಿ

'ಚಕ್ರವರ್ತಿ'ಯ ಮೊದಲ ಭೂಗತ ನೋಟ ಬಿಡುಗಡೆ

Guruprasad Narayana
ಬೆಂಗಳೂರು: ಸಾಕಷ್ಟು ಭೂಗತ ಲೋಕದ ಪಾತ್ರಗಳನ್ನು ಮಾಡಿದ್ದ ನಟ ದರ್ಶನ್ ನಂತರ ಕೌಟುಂಬಿಕ ಡ್ರಾಮಾಗಳತ್ತ ಹೊರಳಿದ್ದರು. ಆದರೆ ನಿರ್ದೇಶಕ ಚಿಂತನ್ ಅವರ ಒತ್ತಾಸೆಯ ಮೇರೆಗೆ ಮತ್ತೆ ಭೂಗತ ಸಿನೆಮಾ 'ಚಕ್ರವರ್ತಿ'ಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್. 
ಈಗ 'ಚಕ್ರವರ್ತಿ'ಯ ಮೊದಲ ಅವತಾರ ಬಿಡುಗಡೆಯಾಗಿದ್ದು, 70-80 ದಶಕಕ್ಕೆ ಕೊಂಡೊಯ್ಯುವ ರೆಟ್ರೋ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಮೇಜ್ ನಲ್ಲಿ ದರ್ಶನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2006 ರ 'ತಂಗಿಗಾಗಿ' ಸಿನೆಮಾದಲ್ಲಿ. 
"ಅವರು ಕೋಪದ ಯುವಕ ಮತ್ತು ಕ್ರಾಂತಿಕಾರಿ ನೋಟವನ್ನು ವಿಭಿನ್ನವಾಗಿ ಕಟ್ಟಿಕೊಡುತ್ತಾರೆ" ಎನ್ನುತ್ತಾರೆ ಚಿಂತನ್. ಇದು ಭೊಗದ ಲೋಕದ ಸಿನೆಮಾ ಆದರೂ, ಕೌಟುಂಬಿಕ ಕಥೆ ಸಿನೆಮಾದ ಕೇಂದ್ರ ಎನ್ನುತ್ತಾರೆ ಚಿಂತನ್. 
"ಭೂಗತ ಲೋಕದ ಆಯಾಮ ಒಂದು ಟ್ವಿಸ್ಟ್ ಆಗಿ ಬರುತ್ತದೆ ಮತ್ತು ನಟನ ಕೋಪದ ವ್ಯಕ್ತಿತ್ವ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಭಿಮಾನಿ ಪ್ರೇಕ್ಷಕರು ದರ್ಶನ್ ಅವರನ್ನು ಕ್ರಾಂತಿಕಾರಿ ಅವತಾರದಲ್ಲಿ ಕಾಣಲು ಕಾಯುತ್ತಿದ್ದಾರೆ. ಆದರೆ ಸಿನೆಮಾ ಒಟ್ಟಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ" ಎನ್ನುತಾತರೆ ಚಿಂತನ್. 
ಸದ್ಯಕ್ಕೆ ಸಿನೆಮಾ ಮೈಸೂರಿನಲ್ಲಿ ಭರದ ಚಿತ್ರೀಕರಣ ನಡೆಸುತ್ತಿದೆ. 
SCROLL FOR NEXT