ನಂದಕಿಶೋರ್, ಅರ್ಜುನ್ ಜನ್ಯ, ಸುದೀಪ್ ಮತ್ತು ಪ್ರದೀಪ್ 
ಸಿನಿಮಾ ಸುದ್ದಿ

'ಟೈಗರ್' ಪ್ರದೀಪ್ ಹುಟ್ಟುಹಬ್ಬಕ್ಕೆ ಟೀಸರ್ ಹಾಡು

'ಟೈಗರ್' ಸಿನೆಮಾದ ನಟ ಪ್ರದೀಪ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರತಂಡ ಅವರಿಗೆ ಟೀಸರ್ ಹಾಡಿನ ಉಡುಗೊರೆ ನೀಡಿದೆ. ನಿರ್ದೇಶಕ ನಂದ ಕಿಶೋರ್ ಮತ್ತು ಅವರ ಸಹೋದರ ತರುಣ್ ಸುಧೀರ್,

ಬೆಂಗಳೂರು: 'ಟೈಗರ್' ಸಿನೆಮಾದ ನಟ ಪ್ರದೀಪ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರತಂಡ ಅವರಿಗೆ ಟೀಸರ್ ಹಾಡಿನ ಉಡುಗೊರೆ ನೀಡಿದೆ. ನಿರ್ದೇಶಕ ನಂದ ಕಿಶೋರ್ ಮತ್ತು ಅವರ ಸಹೋದರ ತರುಣ್ ಸುಧೀರ್, ಸುದೀಪ್ ಹಾಡಿರುವ ಈ ಸಿನೆಮಾದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಿದ್ದಾರೆ. 
"ಸಾಮಾಜಿಕ ಅಂತರ್ಜಾಲದಲ್ಲಿ ಬಿಡುಗಡೆಯಾಗಲಿರುವ ಒಂದು ನಿಮಿಷದ ಟೀಸರ್ ನಲ್ಲಿ ಈ ಹಾಡಿನ ಮತ್ತು ಸಿನೆಮಾದ ಚಿತ್ರೀಕರಣದ ಕೆಲವು ದೃಶ್ಯಗಳು ಇರಲಿವೆ" ಎನ್ನುವ ತರುಣ್ "ನಮ್ಮ ಹೀರೋನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ಯೋಜನೆ ಇಟ್ಟುಕೊಂಡಿದ್ದೆವು" ಎಂದಿದ್ದಾರೆ. 
ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಕನ್ನಡದ ಜನಪ್ರಿಯ ನಟ ಸುದೀಪ್ ಹಾಡಿರುವುದು ವಿಶೇಷ. 
"'ಅಧ್ಯಕ್ಷ' ಸಿನೆಮಾಗೆ ಪುನೀತ್ ಶೀರ್ಷಿಕೆ ಗೀತೆಯನ್ನು ಹಾಡಿದ್ದರು. ಅದು ಬಹಳ ಜನಪ್ರಿಯವಾಗಿತ್ತು. ಈ ಸಿನೆಮಾದಲ್ಲಿ ಸುದೀಪ್ ಹಾಡಿದ್ದಾರೆ" ಎನ್ನುತ್ತಾರೆ ತರುಣ್.
ನಂದಕಿಶೋರ್ ನಿರ್ದೇಶನದ ಈ ಸಿನೆಮಾದ ಆಡಿಯೋ ಗಣೇಶ ಚತುರ್ಥಿಗೆ ಬಿಡುಗಡೆಯಾಗಲಿದೆ. "ಚಿತ್ರೀಕರಣದ ನಂತರದ ಕೆಲಸಗಳು ಕೂಡ ಜಾರಿಯಲ್ಲಿದ್ದು ಸಿನೆಮಾ ಅಕ್ಟೊಬರ್ ನಲ್ಲಿ ಬಿಡುಗಡೆ ಮಾಡುವ ಭರವಸೆಯಿದೆ" ಎನ್ನುತ್ತಾರೆ ತರುಣ್. 
ನಟ ಪ್ರದೀಪ್ ಅವರ ಮಾವ ಕೆ ಶಿವರಾಮು ಇಂಚರ ಫಿಲಂಸ್ ಅಡಿ ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. 
ಮಧುರಿಮಾ ಬ್ಯಾನರ್ಜಿ ನಾಯಕನಟಿಯಾಗಿದ್ದು, ರಂಗಾಯಣ ರಘು ಮತ್ತು ರವಿಶಂಕರ್ ತಾರಾಗಣದ ಭಾಗವಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT