'ಬಬ್ಲುಶ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಹಾರರ್-ಲವ್ ಕೈಬಿಟ್ಟು ಕುಟುಂಬ ಮತ್ತು ಕುಸ್ತಿಯತ್ತ ವೆಂಕಟ್; ಬರಲಿದೆ 'ಬಬ್ಲುಶ'

'ಎ ಡೇ ಇನ್ ದ ಸಿಟಿ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ವೆಂಕಟ್ ಭಾರದ್ವಾಜ್ ತಮ್ಮ ಎರಡನೇ ಸಿನೆಮಾ 'ಬಬ್ಲುಶ'ಗೆ ಐತಿಹಾಸಿಕ ಕೌಟುಂಬಿಕ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿದ್ದಾರೆ.

ಬೆಂಗಳೂರು: 'ಎ ಡೇ ಇನ್ ದ ಸಿಟಿ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ವೆಂಕಟ್ ಭಾರದ್ವಾಜ್ ತಮ್ಮ ಎರಡನೇ ಸಿನೆಮಾ 'ಬಬ್ಲುಶ'ಗೆ ಐತಿಹಾಸಿಕ ಕೌಟುಂಬಿಕ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿದ್ದಾರೆ. 
"ಇಂದು ಬಹುತೇಕ ನಿರ್ದೇಶಕರು ಹಾರರ್ ಅಥವಾ ಪ್ರೀತಿಯ ವಿಷಯದ ಸಿನೆಮಾಗಳನ್ನು ಕೈಗೆತ್ತಿಕೊಳ್ಳುತ್ತಾರೆ. ನಾನು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೆ ಆದುದರಿಂದ ಹಿನ್ನಲೆಯಲ್ಲಿ ಕೌಟುಂಬಿಕ ಮತ್ತು ಕ್ರೀಡಾ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ ವೆಂಕಟ್. 
'ಬಬ್ಲೂಶ' ಸಿನೆಮಾ ಇನ್ನು ಹೆಚ್ಚು ಆಸಕ್ತಿದಾಯಕವಾಗುವುದು ಏಕೆಂದರೆ ಇದು ವಿಜಯನಗರ ಆಳ್ವಿಕೆಯ ಸಮಯದಲ್ಲಿ (1501 ನೇ ಇಸವಿ) ನಡೆದ ನಿಜ ಘಟನೆಯನ್ನು ಆಧರಿಸಿದೆಯಂತೆ. ಆ ಕಾಲದ ಪ್ರಖ್ಯಾತ ಕ್ರೀಡೆಯಾದ ಕುಸ್ತಿಯ ಬಗ್ಗೆ ಈ ಸಿನೆಮಾ. "ನನಗೆ 6 ಅಡಿಗೂ ಉದ್ದವಿದ್ದ ನಟನ ಅವಶ್ಯಕತೆಯಿತ್ತು. ಆದುದರಿಂದ 480 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಡಿಷನ್ ಮಾಡಿದೆ" ಎನ್ನುತ್ತಾರೆ ವೆಂಕಟ್. 
ಸಿನೆಮಾ ಹೆಚ್ಚು ನೈಜವಾಗಿರಲು ಕಲಾವಿದನೇ ಸ್ಟಂಟ್ ಗಳನ್ನೂ ಮಾಡಬೇಕು ಎಂದು ನಂಬುವ ವೆಂಕಟ್ "ನಾನು ಇಬ್ಬರು ಮುಖ್ಯ ನಟರನ್ನು ಆಯ್ಕೆ ಮಾಡಿದೆ. ಹರೀಶ್ ಅರ್ಜುನ್ ಮತ್ತು ಮಣಿ ಶೆಟ್ಟಿ. ಹಾಗೆಯೇ ಬಿಹಾರದ ಚಿನ್ನದ ಪದಕ ವಿಜೇತ ಘನಶ್ಯಾಮ್ ಅವರಿಂದ ತರಬೇತಿ ಪಡೆದ ಕೆಲವರನ್ನು ಕೂಡ. ಸ್ಟಂಟ್ ಮಾಸ್ಟರ್ ಸುಪ್ರೀಂ ಬಾಬು ಅವರನ್ನು ಕೂಡ ತೆಕ್ಕೆಗೆ ತೆಗೆದುಕೊಂಡೆವು" ಎಂದು ವಿವರಿಸುತ್ತಾರೆ. 
ಸಿ ವಿ ಶಿವಶಂಕರ್ ನಿರ್ಮಿಸಿರುವ 'ಬಬ್ಲೂಶ'ದಲ್ಲಿ ಮೃದುಲಾ ಭಾಸ್ಕರ್ ನಾಯಕನಟಿ. ಈ ಸಿನೆಮಾ ಮೊದಲು ಅಮೆರಿಕಾದಲ್ಲಿ ಬಿಡುಗಡೆಯಾಗಿ ನಂತರ ಇಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT