ಪೂರಿ ಜಗನ್ನಾಥ್ 
ಸಿನಿಮಾ ಸುದ್ದಿ

'ರೋಗ್' ಮೂಲಕ ೧೨ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ ಪೂರಿ ಜಗನ್ನಾಥ್

ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ಡಿಸೆಂಬರ್ ವಿಶೇಷ ತಿಂಗಳು, ಏಕೆಂದರೆ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಇದೆ ತಿಂಗಳಲ್ಲಿ ಬೀಳುತ್ತದೆ. ಆದುದರಿಂದ ಅವರ ಸೋದರಳಿಯ

ಬೆಂಗಳೂರು: ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ಡಿಸೆಂಬರ್ ವಿಶೇಷ ತಿಂಗಳು, ಏಕೆಂದರೆ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಇದೆ ತಿಂಗಳಲ್ಲಿ ಬೀಳುತ್ತದೆ. ಆದುದರಿಂದ ಅವರ ಸೋದರಳಿಯ ಇಶಾನ್ ಅವರನ್ನು ಕನ್ನಡಕ್ಕೆ ಪರಿಚಯಿಸಲು ಇದೇ ತಿಂಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. 
ಇಶಾನ್ ಅವರಿಗೆ ಅದ್ದೂರಿ ಓಪನಿಂಗ್ ದೊರಕಿಸಲು ಅವರು ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರನ್ನು ನಿರ್ದೇಶನಕ್ಕೆ ಕರೆತಂದಿದ್ದಾರೆ. ಸಿನೆಮಾ ಶೀರ್ಷಿಕೆ 'ರೋಗ್'. 
ನಿರ್ಮಾಪಕ ಎಲ್ಲವನ್ನು ಈಗಾಗಲೇ ಯೋಜಿಸಿದ್ದು, ಈ ಸಿನೆಮಾದ ಟೀಸರ್ ಹೈದರಾಬಾದಿನ ಪಂಚಾತಾರ ಹೋಟೆಲ್ ನಲ್ಲಿ ಡಿಸೆಂಬರ್ ೧೨ ಕ್ಕೆ ಬಿಡುಗಡೆಯಾಗಲಿದೆ. ಇದರ ನಂತರ ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಿನೆಮಾ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆಯಂತೆ. 
"ರೋಗ್ ಸಿನೆಮಾದ ಮೂಲಕ ಪೂರಿ ಜಗನ್ನಾಥ್ ೧೨ ವರ್ಷಗಳ ನಂತರ ಕನ್ನಡಕ್ಕೆ ಹಿಂದಿರುಗಿದ್ದಾರೆ. ಅವರು ಕನ್ನಡ ನಟನನ್ನು ಪರಿಚಯಿಸುತ್ತಿರುವುದಕ್ಕೆ ನಿರ್ಮಾಪಕ ಬಹಳ ಉತ್ಸಾಹದಿಂದಿದ್ದಾರೆ" ಎನ್ನುತ್ತವೆ ಮೂಲಗಳು. 
ಇದಕ್ಕೂ ಮೊದಲು ಪೂರಿ ಜಗನ್ನಾಥ್ ೨೦೦೧ ರಲ್ಲಿ ಶಿವರಾಜ್ ಕುಮಾರ್ ಅವರ 'ಯುವರಾಜ' ನಿರ್ದೇಶಿಸಿದ್ದರು. ನಂತರ ಪುನೀತ್ ರಾಜಕುಮಾರ್ ಅವರ 'ಅಪ್ಪು' ಸಿನೆಮಾವನ್ನು ೨೦೦೨ ನಿರ್ದೇಶಿಸದ್ದು, ಆ ಸಿನೆಮಾ ಭಾರಿ ಯಶಸ್ಸು ಕಂಡು ಪುನೀತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕನಟನಾಗಿ ಪರಿಚಯಿಸಿತ್ತು.
'ರೋಗ್' ತ್ರಿಭಾಷಾ ಚಲನಚಿತ್ರವಾಗಿದ್ದು, ಇದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರುತ್ತಿದೆ. ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಬ್ಯಾಂಗ್ಕಾಕ್ ನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಠಾಕುರ್ ಅನೂಪ್ ಸಿಂಗ್ ಖಳನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. 
ಸುನಿಲ್ ಕಶ್ಯಪ್ ಸಿನೆಮಾಗೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT