ಸುದೀಪ್ ಮತ್ತು ಚಿತ್ರಾಲಿ, ವಾರಸ್ದಾರ ಧಾರವಾಹಿಯ ಮೊದಲ ನೋಟ 
ಸಿನಿಮಾ ಸುದ್ದಿ

ತಾಯಿ-ಮಗುವಿನ ಸುತ್ತ ಸುತ್ತುವ ಧಾರಾವಾಹಿ 'ವಾರಸ್ದಾರ'

ಕನ್ನಡದ ಸ್ಟಾರ್ ನಟ ಸುದೀಪ್ ಗೆ ಕಿರುತೆರೆ ಕೂಡ ಹೊಸದೇನಲ್ಲ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ...

ಕನ್ನಡದ ಸ್ಟಾರ್ ನಟ ಸುದೀಪ್ ಗೆ ಕಿರುತೆರೆ ಕೂಡ ಹೊಸದೇನಲ್ಲ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದಾರೆ. ಇದೀಗ ವಾರಸ್ದಾರ ಎಂಬ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಇದರಲ್ಲಿ ನಟಿ ಯಜ್ಞ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಗೆ ಅವರು ಪಾದಾರ್ಪಣೆ ಮಾಡಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ನ ವಿಜೇತೆ ಬಾಲಕಿ ಚಿತ್ರಾಲಿ ಕೂಡ ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. 
ಚಿತ್ರಾಲಿಯನ್ನು ಆಯ್ಕೆ ಮಾಡಿದ್ದು ಸುದೀಪ್ ಅವರೇ. ಆಕೆಯ ನಟನಾ ಸಾಮರ್ಥ್ಯಕ್ಕೆ ಸುದೀಪ್ ಮಾರುಹೋಗಿದ್ದಾರಂತೆ.
ಗಡ್ಡ ವಿಜಿ ನಿರ್ದೇಶಿಸುತ್ತಿರುವ ವಾರಸ್ದಾರ ಧಾರವಾಹಿಯಲ್ಲಿ ರವಿ ಚೇತನ್, ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಮೊದಲಾದವರು ಅಭಿನಯಿಸುತ್ತಿದ್ದಾರೆ.
ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಎದುರಿಸುವ ತೊಂದರೆಗಳನ್ನು ವಾರಸ್ದಾರ ಧಾರವಾಹಿಯ ಕಥೆ ಒಳಗೊಂಡಿದೆ. ಶಿವಪುರ ಜಿಲ್ಲೆಯ ಕಥೆ ಹೆಣೆಯಲಾಗಿದೆ. ಡಿಸೆಂಬರ್ 19ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 
ಸುದೀಪ್ ಅವರು ನಿರ್ಮಾಪಕರಾಗಿರುವುದರಿಂದ ಧಾರವಾಹಿಗೆ ಸಿನಿಮಾ  ನಿರ್ಮಾಣದ ಗುಣಮಟ್ಟವನ್ನು ಅಳವಡಿಸಲಾಗಿದೆ. ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT