'ಕಿಸ್' ಸಿನೆಮಾಗೆ ಸೃಜನಶೀಲ ಪೋಸ್ಟರ್ ವಿನ್ಯಾಸ ಮಾಡಿದ ಎ ಪಿ ಅರ್ಜುನ್ 
ಸಿನಿಮಾ ಸುದ್ದಿ

'ಕಿಸ್' ಸಿನೆಮಾಗೆ ಸೃಜನಶೀಲ ಪೋಸ್ಟರ್ ವಿನ್ಯಾಸ ಮಾಡಿದ ನಿರ್ದೇಶಕ

ತಮ್ಮ ಮುಂದಿನ ಚಿತ್ರ 'ಕಿಸ್'ಗೆ ಇನ್ನೂ ಸೂಕ್ತ ತಾರಾಬಳಗದ ಆಯ್ಕೆ ಮುಗಿಯದಿದ್ದರೂ, ಪ್ರೇಮಿಗಳ ದಿನಾಚರಣೆಯಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನೆಮಾಗೆ

ಬೆಂಗಳೂರು: ತಮ್ಮ ಮುಂದಿನ ಚಿತ್ರ 'ಕಿಸ್'ಗೆ ಇನ್ನೂ ಸೂಕ್ತ ತಾರಾಬಳಗದ ಆಯ್ಕೆ ಮುಗಿಯದಿದ್ದರೂ, ಪ್ರೇಮಿಗಳ ದಿನಾಚರಣೆಯಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನೆಮಾಗೆ ಚಾಲನೆ ನೀಡಿದ್ದಾರೆ ನಿರ್ದೇಶಕ ಎ ಪಿ ಅರ್ಜುನ್. "ನಾನು ಸಿನೆಮಾಗೆ ಚಾಲನೆ ನೀಡುವ ದಿನದ ಬಗ್ಗೆ ಕೂತು ಚರ್ಚಿಸುವಾಗ, ನನ್ನ ಬೆರಳುಗಳು ಒಂದಕ್ಕೊಂದು ಬೆಸೆದಿದ್ದವು. ಅವುಗಳ ಮೇಲೆ ಹೃದಯ ಬಿಡಿಸಿದೆ. ಇದು ಪ್ರೀತಿಯ ಸಂಕೇತ ಎಂದೆನಿಸಿ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರಿಗೆ ತಿಳಿಸಿದೆ. ಅವರು ಇದು ಸೃಜನಶೀಲವಾಗಿದೆ ಎಂದರು. ಇನ್ನೊಂದಷ್ಟು ವಿನ್ಯಾಸಗಳನ್ನು ರಚಿಸಿದ ಮೇಲೆ, 'ಕಿಸ್' ಸಿನೆಮಾದ ಅಧಿಕೃತ ಪೋಸ್ಟರ್ ಗಳಾದವು" ಎಂದು ವಿವರಿಸುತ್ತಾರೆ ಅರ್ಜುನ್.

ಹಿರೋ ಮತ್ತಿ ಹಿರೋಯಿನ್ ಅಂತಿಮವಾಗುವಾರೆಗೂ ಈ ಪೋಸ್ಟರ್ ಗಳ ಮೂಲಕವೇ 'ಕಿಸ್' ಸಿನೆಮಾದ ಬಗ್ಗೆ ಮಾತನಾಡಲಿದ್ದಾರಂತೆ ಅರ್ಜುನ್. ಹೊಸ ಮುಖಗಳ ಹುಡುಕಾಟದಲ್ಲಿರುವ ನಿರ್ದೇಶಕ ಫೆಬ್ರವರಿ ೨೮ ಮತ್ತು ೨೯ರಂದು ಆಡಿಶನ್ ನಡೆಸಲಿದ್ದಾರಂತೆ. "ಆಡಿಶನ್ ನಂತರ ಮುಖ್ಯ ಪಾತ್ರಗಳಿಗೆ ಒಂದು ತಿಂಗಳ ಕಾಲ ತರಬೇತಿ ಇರುತ್ತದೆ. ಏಪ್ರಿಲ್ ೨೪ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತಾರೆ ಅರ್ಜುನ್. ಈ ಸಿನೆಮಾದ ನಿರ್ಮಾಪಕ ವಿ ರವಿಕುಮಾರ್.

ಅರ್ಜುನ್ ಈ ಸಿನೆಮಾಗೆ 'ತುಂಟ ತುಟಿಗಳ ಆಟೋಗ್ರಾಫ್' ಎಂಬ ಅಡಿಶೀರ್ಷಿಕೆ ನೀಡಿದ್ದಾರೆ. "ಪವಿತ್ರ ಪ್ರೀತಿಯ ಸಂಕೇತವಾಗಿರುವ 'ಕಿಸ್' ಸಿನೆಮಾದ ಕೇಂದ್ರ ವಿಷಯ" ಎನ್ನುತ್ತಾರೆ.

'ಅಂಬಾರಿ', 'ಅದ್ದೂರಿ' ರೋಮ್ಯಾಂಟಿಕ್ ಸಿನೆಮಾಗಳನ್ನು ನಿರ್ದೇಶಿಸಿದ್ದ ಅರ್ಜುನ್, ದರ್ಶನ್ ಅಭಿನಯದ 'ಐರಾವತ'ವನ್ನೂ ನಿರ್ದೇಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT