ನಟಿ ಅಮೂಲ್ಯ 
ಸಿನಿಮಾ ಸುದ್ದಿ

'ಮಾಸ್ತಿ ಗುಡಿ'ಗೆ ಬರಲಿರುವ ಅಮೂಲ್ಯ

ನಾಗಶೇಖರ್ ನಿರ್ದೇಶನದ, ದುನಿಯಾ ವಿಜಯ್ ನಾಯಕನಟನಾಗಿರುವ 'ಮಾಸ್ತಿ ಗುಡಿ' ಸಿನೆಮಾಗೆ ಅಮೂಲ್ಯ ನಾಯಕ ನಟಿಯರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು: ನಾಗಶೇಖರ್ ನಿರ್ದೇಶನದ, ದುನಿಯಾ ವಿಜಯ್ ನಾಯಕನಟನಾಗಿರುವ 'ಮಾಸ್ತಿ ಗುಡಿ' ಸಿನೆಮಾಗೆ ಅಮೂಲ್ಯ ನಾಯಕ ನಟಿಯರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ನಿರ್ಮಾಪಕ ಸುಂದರ್ ಪಿ ಗೌಡ್ರು ಈ ಸುದ್ದಿಯನ್ನು ಧೃಢೀಕರಿಸಿದ್ದು "ಹೌದು ಅಮೂಲ್ಯ ಈ ಪಾತ್ರಕ್ಕೆ ತಕ್ಕ ನಟಿ. ಅವರು ನಾಯಕ ನಟಿಯರಲ್ಲಿ ಒಬ್ಬರಾಗಿ ತಂಡ ಸೇರಲಿದ್ದಾರೆ. ಇನ್ನೆರಡು ದಿನಗಳಲ್ಲಿ ಉಳಿದ ನಟಿಯರನ್ನು ಆಯ್ಕೆ ಮಾಡಲಿದ್ದೇವೆ" ಎನ್ನುತ್ತಾರೆ.

ಕೊನೆಯ ಬಾರಿಗೆ 'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಈಗ 'ಕೃಷ್ಣ ರುಕ್ಕು' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನೆಮಾ ಮುಂದಿನ ವಾರ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ 'ಮಾಸ್ತಿ ಗುಡಿ'ಗೆ ಕೃತಿ ಕರಬಂಧ ಮತ್ತು ಪ್ರಿಯಾಮಣಿ ಅವರನ್ನು ಕೂಡ ಕೇಳಲಾಗಿದೆಯಂತೆ. "ಇದು ಕಮರ್ಷಿಯಲ್ ಸಿನೆಮಾ. ತಮ್ಮ ಪಾತ್ರದ ಶೋಧನೆಗೆ ದುನಿಯಾ ವಿಜಯ್ ಕಷ್ಟ ಪಟ್ಟಿದ್ದಾರೆ. ಮೊದಲಿಗೆ ನಾಯಕ ನಟಿಯರಾಗಿ ಹೊಸಬರನ್ನು ಆಯ್ಕೆ ಮಾಡುವ ಇರಾದೆಯಿತ್ತು, ಆದರೆ ತರಬೇತಿಯ ಸಮಯ ಹೆಚ್ಚಾಗುವುದೆಂದು ಮತ್ತು ಫೆಬ್ರವರಿ ೨೫ರಿಂದ ಚಿತ್ರೀಕರಣ ಪ್ರಾರಂಭವಾಗಬೇಕಿರುವುದರಿಂದ ಜನಪ್ರಿಯ ನಟಿಯರ ಆಯ್ಕೆಯೇ ಸೂಕ್ತ ಎಂದೆನಿಸಿ ಮೊದಲಿಗೆ ಅಮೂಲ್ಯ ಅವರನ್ನು ಅಂತಿಮಗೊಳಿಸಲಾಗಿದೆ" ಎನ್ನುತ್ತವೆ ಮೂಲಗಳು.

ಹಿರೋ, ಹಿರೋಯಿನ್ ಅಲ್ಲದೆ ಹಿರಿಯ ನಟರಾದ ದೇವರಾಜ್, ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲಾ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮತ್ತು ಶರತ್ ಲೋಹಿತಾಶ್ವ ಕೂಡ ಸಿನೆಮಾದಲ್ಲಿ ನಟಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT