ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ಚಿರು ಸಂಕ್ರಾಂತಿ

Vishwanath S

ಸಿನಿಮಾ ಮಂದಿ ಹೊಸ ವರ್ಷದ ಆಚರಣೆಗೆ ಹೊರ ದೇಶಗಳಿಗೆ, ಪರ ಊರುಗಳಿಗೆ ಹೋಗುವುದು ಕಾಮನ್. ಆದರೆ, ಸಂಕ್ರಾಂತಿ ಹಬ್ಬದ ಆಚರಣೆಗೆ ಕುಟುಂಬ ಸಮೇತರಾಗಿ ಪಕ್ಕದ ರಾಜ್ಯಕ್ಕೆ ಹೋಗುವುದು ತೀರಾ ಅಪರೂಪ ಅಂತ ಹೇಳಬಹುದು.

ಅಂಥ ಅಪರೂಪಕ್ಕೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಕುಟುಂಬ ಸಾಕ್ಷಿಯಾಗುತ್ತಿದೆ. ಹೌದು, ಈ ಬಾರಿ ಚಿರಂಜೀವಿ ಕುಟುಂಬ ಬೆಂಗಳೂರಿನಲ್ಲಿ ಸಂಕ್ರಾಂತಿಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬದ 50 ಮಂದಿ ಸದಸ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿನ ಚಿರಂಜೀವಿ ಅವರ ಫಾರಂ ಹೌಸ್‍ನಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ, ಅಲ್ಲು ಶಿರಿಷ್, ಸಾಯಿಧರ್ಮ ತೇಜ ಅವರೂ ಬರಲಿದ್ದಾರೆ. ಇವರೊಂದಿಗೆ ಚಿರಂಜೀವಿ ದಂಪತಿ ಅಂತೂ ಇದ್ದೇ ಇರುತ್ತಾರೆ.

SCROLL FOR NEXT