'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ದೇವರ ನಾಡಲ್ಲಿ': ಸ್ವತಂತ್ರ ಚಿತ್ರಮಂದಿರಗಳು ಇಲ್ಲ; ಮಲ್ಟಿಪ್ಲೆಕ್ಸ್ ಗಳೂ ಇಲ್ಲ; ಬಿಡುಗಡೆ ಮುಂದೂಡಿಕೆ

ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ

ಬೆಂಗಳೂರು: ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ ಬಿಡುಗಡೆಯನ್ನು ಈಗ ಮುಂದೂಡಲಾಗಿದ್ದು, ಫೆಬ್ರವರಿ ೫ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಕಾರಣ ಚಿತ್ರಮಂದಿರಗಳ ಕೊರತೆ.

ಇದಕ್ಕೂ ಮುಂಚಿತವಾಗಿ ಘೋಷಣೆಯಾದಂತೆ, ಸ್ವತಂತ್ರ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗದೆಯಾಗದೆ ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಸಂಕ್ರಾಂತಿ ಹಬ್ಬಕ್ಕೆ ವಿವಿಧ ಭಾಷೆಗಳ ಸಿನೆಮಾಗಳ ಪ್ರವಾಹವೇ ಹರಿದುಬಂದಿದ್ದು ಸ್ಟಾರ್ ನಟನಿಲ್ಲದ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳ ಕೊರತೆಯೂ ಕೂಡ ಕಂಡುಬಂದಿದೆ.

ಈ ಸಿನೆಮಾವನ್ನು ತೂಗುದೀಪ್ ಡಿಸ್ಟ್ರಿಬ್ಯೂಶನ್ಸ್ ವಿತರಣೆ ಮಾಡುತ್ತಿದ್ದು, ಆ ಸಂಸ್ಥೆಯವರೆ ಆದ ನಟ ದರ್ಶನ್, ತಮ್ಮದೇ ಸಿನೆಮಾ 'ವಿರಾಟ್' ಇತರ ಸಣ್ಣ ಬಜೆಟ್ ಚಿತ್ರಗಳಿಗೆ ಹೊಡೆತ ನೀಡಬಹುದೆಂದು ನಿರ್ಮಾಪಕ ಕಲ್ಯಾಣ ವರಿಗೆ ಬಿಡುಗಡೆ ಮುಂದೂಡುವಂತೆ ಕೋರಿದ್ದನ್ನು ಇಲ್ಲಿ ನೆನೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT