'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ದೇವರ ನಾಡಲ್ಲಿ': ಸ್ವತಂತ್ರ ಚಿತ್ರಮಂದಿರಗಳು ಇಲ್ಲ; ಮಲ್ಟಿಪ್ಲೆಕ್ಸ್ ಗಳೂ ಇಲ್ಲ; ಬಿಡುಗಡೆ ಮುಂದೂಡಿಕೆ

ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ

ಬೆಂಗಳೂರು: ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ ಬಿಡುಗಡೆಯನ್ನು ಈಗ ಮುಂದೂಡಲಾಗಿದ್ದು, ಫೆಬ್ರವರಿ ೫ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಕಾರಣ ಚಿತ್ರಮಂದಿರಗಳ ಕೊರತೆ.

ಇದಕ್ಕೂ ಮುಂಚಿತವಾಗಿ ಘೋಷಣೆಯಾದಂತೆ, ಸ್ವತಂತ್ರ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗದೆಯಾಗದೆ ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಸಂಕ್ರಾಂತಿ ಹಬ್ಬಕ್ಕೆ ವಿವಿಧ ಭಾಷೆಗಳ ಸಿನೆಮಾಗಳ ಪ್ರವಾಹವೇ ಹರಿದುಬಂದಿದ್ದು ಸ್ಟಾರ್ ನಟನಿಲ್ಲದ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳ ಕೊರತೆಯೂ ಕೂಡ ಕಂಡುಬಂದಿದೆ.

ಈ ಸಿನೆಮಾವನ್ನು ತೂಗುದೀಪ್ ಡಿಸ್ಟ್ರಿಬ್ಯೂಶನ್ಸ್ ವಿತರಣೆ ಮಾಡುತ್ತಿದ್ದು, ಆ ಸಂಸ್ಥೆಯವರೆ ಆದ ನಟ ದರ್ಶನ್, ತಮ್ಮದೇ ಸಿನೆಮಾ 'ವಿರಾಟ್' ಇತರ ಸಣ್ಣ ಬಜೆಟ್ ಚಿತ್ರಗಳಿಗೆ ಹೊಡೆತ ನೀಡಬಹುದೆಂದು ನಿರ್ಮಾಪಕ ಕಲ್ಯಾಣ ವರಿಗೆ ಬಿಡುಗಡೆ ಮುಂದೂಡುವಂತೆ ಕೋರಿದ್ದನ್ನು ಇಲ್ಲಿ ನೆನೆಯಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT