'ನಟರಾಜ ಸರ್ವಿಸ್' ನಲ್ಲಿ ಶರಣ್ 
ಸಿನಿಮಾ ಸುದ್ದಿ

ಯಲ್ಲಾಪುರ ಕಾಡಿನಲ್ಲಿ ನಿಂತ ನಟರಾಜ ಸರ್ವಿಸ್

ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರತಂಡ ಮುಂದಿನ ೨೫ ದಿನಗಳವರೆಗೆ ದಾಂಡೇಲಿ ಮತ್ತು ಯಲ್ಲಾಪುರ ಕಾಡುಗಳಲ್ಲಿ ಶಿಬರ ಹೂಡಲಿದೆ. ಶರಣ್

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರತಂಡ ಮುಂದಿನ ೨೫ ದಿನಗಳವರೆಗೆ ದಾಂಡೇಲಿ ಮತ್ತು ಯಲ್ಲಾಪುರ ಕಾಡುಗಳಲ್ಲಿ ಶಿಬರ ಹೂಡಲಿದೆ. ಶರಣ್ ಮತ್ತು ಮಯೂರಿ ಸಿನೆಮಾದ ನಾಯಕ ಮತ್ತು ನಾಯಕಿ.

ಎನ್ ಎಸ್ ರಾಜಕುಮಾರ್ ನಿರ್ಮಾಣದ ಮತ್ತು ಪುನೀತ್ ರಾಜಕುಮಾರ್ ಅರ್ಪಿಸುತ್ತಿರುವ ಈ ಸಿನೆಮಾದ ಬಹಳಷ್ಟು ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು, ಮುಂದಿನ ಭಾಗ ಗೋವಾ ಗಡಿಯಲ್ಲಿ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ ಪವನ್.

ಯಲ್ಲಾಪುರ ಕನ್ನಡ ಚಿತ್ರ ನಿರ್ದೇಶಕರಿಗೆ ನೆಚ್ಚಿನ ಚಿತ್ರೀಕರಣ ತಾಣವಾಗುತ್ತಿರುವುದು ವಿಶೇಷ. ಇತ್ತೀಚೆಗಷ್ಟೇ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಕೆಲವು ಭಾಗಗಳ ಚಿತ್ರೀಕರಣವನ್ನು ಅಲ್ಲಿ ನಡೆಸಿದ್ದರು ಮತ್ತು ಪವನ್ ಅವರೇ ತಮ್ಮ ಚಿತ್ರ 'ಜೆಸ್ಸಿ'ಯ ಒಂದು ಹಾಡನ್ನು ಅಲ್ಲಿ ಚಿತ್ರೀಕರಿಸಿದ್ದರು.

ಚಿತ್ರೀಕರಣಕ್ಕೆ ಹವಾಮಾನ ಪಕ್ವವಾಗಿದೆ ಎನ್ನುವ ನಿರ್ದೇಶಕ "ಬೆಳಗಿನ ಮಂಜು ಹನಿಯ ನಡುವೆ ಸೂರ್ಯನ ಚಿನ್ನದ ಕಿರಣಗಳನ್ನು ಸೆರೆ ಹಿಡಿಯಲು ಉತ್ಸುಕನಾಗಿದ್ದೇನೆ. ನಾನು ನನ್ನ ಸಿನೆಮಾಗಳ ಚಿತ್ರೀಕರಣಕ್ಕೆ ಸ್ವಾಭಾವಿಕ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಬಳಸಲು ಬಯಸುತ್ತೇನೆ" ಎನ್ನುತ್ತಾರೆ ಪವನ್.

ಇದೇ ಮೊದಲ ಬಾರಿಗೆ ಶರಣ್ ಮತ್ತು ಮಯೂರಿ ಒಟ್ಟಿಗೆ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

HAL ನಿರ್ಮಿತ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್‌ಗೆ ಸಚಿವ ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ

ಬಂಟ್ವಾಳ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ

ಕೋಗಿಲು ಮನೆಗಳ ತೆರವು ಕೇಸ್​ಗೆ ಟ್ವಿಸ್ಟ್: 2016ರ ಮೊದಲು ಇಲ್ಲಿ ಮನೆಗಳೇ ಇರಲಿಲ್ಲ, ನಿವಾಸಿಗಳ ಆರೋಪಕ್ಕೆ ಸ್ಯಾಟಲೈಟ್ ಫೋಟೋ ಮೂಲಕ GBA ತಿರುಗೇಟು..!

Kogilu layout Demolition: ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡಲಾಗುವುದು; ಸಿಎಂ ಸಿದ್ದರಾಮಯ್ಯ

SCROLL FOR NEXT