ಕೋಟಿಗೊಬ್ಬ-2 ಸಿನೆಮಾದಲ್ಲಿ ನಟ ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ಸಿನೆಮಾಗೆ ಸಂಗೀತ ನೀಡುವುದು ಡಬಲ್ ಕೆಲಸವಾಗಿತ್ತು: ಇಮ್ಮಾನ್

ಸುಮಾರು 65 ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶಿಸಿರುವ ಇಮ್ಮಾಮ್ ಡಿ ಮೊದಲ ಬಾರಿಗೆ ಕನ್ನಡ ಸಿನೆಮಾ ಕೋಟಿಗೊಬ್ಬ-2ಕ್ಕೆ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿರುವ

ಬೆಂಗಳೂರು: ಸುಮಾರು 65 ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶಿಸಿರುವ ಇಮ್ಮಾಮ್ ಡಿ ಮೊದಲ ಬಾರಿಗೆ ಕನ್ನಡ ಸಿನೆಮಾ ಕೋಟಿಗೊಬ್ಬ-2ಕ್ಕೆ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿರುವ ದ್ವಿಭಾಷಾ ಚಿತ್ರ ತಮಿಳಿನಲ್ಲಿ 'ಮುದಿಂಜ ಇವನ ಪುಡಿ' ಹೆಸರಿನಲ್ಲಿ ಬಿಡುಗಡೆಯಾಗಲಿದೆ. 
"ಎರಡೂ ಬಾಷೆಗಳಿಗೆ ಸಂಗೀತ ನೀಡುವುದಕ್ಕೆ ನಿರ್ದೇಶಕ ಕೆ ಎಸ್ ರವಿಕುಮಾರ್ ನನ್ನನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ಇಮ್ಮಾನ್. 
ಸುದೀಪ್ ನಟನೆಯ ಒಂದೆರಡು ಸಿನೆಮಾ ಮತ್ತು ಅವರ ಒಂದಷ್ಟು ಹಾಡುಗಳನ್ನು ನೋಡುವ ಮೂಲಕ ಕೋಟಿಗೊಬ್ಬ-2 ಸಿನೆಮಾ ಸಂಗೀತಕ್ಕೆ ಸಿದ್ಧತೆ ಮಾಡಿಕೊಂಡರಂತೆ ಇಮ್ಮಾನ್. "ನಾನು ನಿರ್ಧಿಷ್ಟ ಸ್ಟಾರ್ ಗಾಗಿ ಸಂಗೀತ ಮಾಡುವುದಿಲ್ಲ. ಅದು ಸೃಜನಶೀಯತೆಗೆ ತಡೆಯೊಡ್ಡುತ್ತದೆ. ನನಗೆ ನಿರ್ದೇಶಕ ಮೊದಲ ಪ್ರೇಕ್ಷಕ ಮತ್ತು ಸ್ಕ್ರಿಪ್ಟ್ ಗೆ ತಕ್ಕಂತೆ ಸಂಗೀತ ಮಾಡುವುದು ನನ್ನ ರೂಢಿ" ಎನ್ನುತ್ತಾರೆ. 
ರವಿಕುಮಾರ್ ಜೊತೆಗೆ ಹಲವಾರು ಬಾರಿ ಚರ್ಚಿಸಿದ ನಂತರ ಪಾತ್ರ ವಿನ್ಯಾಸದ ಮೇಲೆ ಹಿಡಿತ ಸಿಕ್ಕಿ ಅದಕ್ಕೆ ತಕ್ಕಂತೆ ಸಂಗೀತ ನಿರ್ದೇಶಿಸಿದ್ದಾಗಿ ಹೇಳುವ ಇಮ್ಮಾನ್, ಕನ್ನಡ ಮತ್ತು ತಮಿಳು ಸಂಭಾಷಣೆಗೆ ಹೊಂದುವಂತಹ ಸಂಗೀತ ಸಂಯೋಜಿಸುವುದು ತ್ರಾಸದಾಯಕ ಕೆಲಸವಾಗಿತ್ತು ಎನ್ನುತ್ತಾರೆ, "ಎರಡು ಭಾಷೆಗಳಿಗೆ ದೃಶ್ಯಗಳನ್ನು ಸಮಾನಾಂತರವಾಗಿ ಚಿತ್ರೀಕರಣ ಮಾಡಲಾಗುತ್ತಿತ್ತು. ಎಲ್ಲ ದೃಶ್ಯಗಳನ್ನು ಎರಡೆರಡು ಬಾರಿಗೆ ನಟಿಸಲಾಗುತ್ತಿತ್ತು" ಎಂದು ಹೇಳುವ ಅವರು ಎರಡು ಭಾಷೆಯ ಪದಗಳ ಉದ್ದ ಬದಲಾಗುವುದರಿಂದ ಇದು ಡಬಲ್ ಕೆಲಸ ಹಿಡಿಯಿತು ಎನ್ನುತ್ತಾರೆ. 
ಗೀತಸಾಹಿತಿ ನಾಗೇಂದ್ರ ಪ್ರಸಾದ್ ಈ ನಿಟ್ಟಿನಲ್ಲಿ ತಮಗೆ ಸಹಾಯ ಮಾಡಿದ್ದನ್ನು ನೆನಪಿಸಿಕೊಳ್ಳುವ ಇಮ್ಮಾನ್ "ಅವರಿಗೆ ತಮಿಳು ಗೊತ್ತಿರುವುದರಿಂದ ನನಗೆ ನಿರಂತರವಾಗಿ ಅವರ ಜೊತೆ ಸಂವಹನ ಸಾಧ್ಯವಾಯಿತು" ಎನ್ನುತ್ತಾರೆ. 
ಕೋಟಿಗೊಬ್ಬ-2 ಸಿನೆಮಾದ ಆಡಿಯೋವನ್ನು ಆನಂದ್ ಆಡಿಯೋ ಸಂಸ್ಥೆ ಇದು ಬಿಡುಗಡೆ ಮಾಡಲಿದೆ. ಸೂರಪ್ಪ ಬಾಬು ಇದನ್ನು ನಿರ್ಮಿಸಿದ್ದು, ನಿತ್ಯ ಮೆನನ್ ಸುದೀಪ್ ಎದುರು ನಟಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT