'ಕಲ್ಪನಾ-2' ಸಿನೆಮಾದಲ್ಲಿ ಪ್ರಿಯಾಮಣಿ ಮತ್ತು ಉಪೇಂದ್ರ 
ಸಿನಿಮಾ ಸುದ್ದಿ

ಉಪೇಂದ್ರ 'ಹಿರೋಯಿಸಂ' ಮೇಲೆ ಅವಲಂಬಿತರಾಗಿಲ್ಲ: 'ಕಲ್ಪನಾ-2' ನಿರ್ದೇಶಕ

ಉಪೇಂದ್ರ ನಟನೆಯ ಹಾರರ್ ಸಿನೆಮಾ 'ಕಲ್ಪನಾ-2' ನಿರ್ದೇಶಕ ಅನಂತರಾಜು ಈ ಸಿನೆಮಾ ಕೈಗೆತ್ತಿಕೊಳ್ಳುವುದಕ್ಕೆ ತಮಗಿದ್ದ ಸ್ಫೂರ್ತಿಯನ್ನು ಬಿಚ್ಚಿಟ್ಟಿದ್ದಾರೆ. ಉಪೇಂದ್ರ ಅವರಿಗೆ...

ಬೆಂಗಳೂರು: ಉಪೇಂದ್ರ ನಟನೆಯ ಹಾರರ್ ಸಿನೆಮಾ 'ಕಲ್ಪನಾ-2' ನಿರ್ದೇಶಕ ಅನಂತರಾಜು ಈ ಸಿನೆಮಾ ಕೈಗೆತ್ತಿಕೊಳ್ಳುವುದಕ್ಕೆ ತಮಗಿದ್ದ ಸ್ಫೂರ್ತಿಯನ್ನು ಬಿಚ್ಚಿಟ್ಟಿದ್ದಾರೆ. ಉಪೇಂದ್ರ ಅವರಿಗೆ ಈ ಪ್ರಕಾರ ಇಷ್ಟ ಎನ್ನುವ ಅವರು "ಇತ್ತೀಚಿನ ದಿನಗಳಲ್ಲಿ ಹಾರರ್ ವಿಷಯಗಳು ಜನಪ್ರಿಯವಾಗಿವೆ. ನಾನು ಸರಿಯಾದ ಸಮಯದಲ್ಲಿ ಇಲ್ಲಿದ್ದೇನೆ" ಎನ್ನುತ್ತಾರೆ. 
ಕೇವಲ ಹಿರೋಯಿಸಂ ಮೇಲೆ ಆವಲಂಬಿತವಾಗದೆ ನಟ ಉಪೇಂದ್ರ ಹಲವಾರು ಪ್ರಾಕಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ ಎನ್ನುವ ನಿರ್ದೇಶಕ "ಉಪ್ಪಿ ನಟಿಸುತ್ತಾರೆ ಅಲ್ಲದೆ ನಿರ್ದೇಶನದಲ್ಲೂ ಅವರಿಗೆ ಛಾತಿ ಇದೆ. ಅವರಿಂದ ಕಲಿಯುವುದು ಒಂದು ಅವಕಾಶ. ಕಲ್ಪನಾ-2 ನಿರ್ದೇಶಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ರಾಜು. 
ರಾಘವ ಲಾರೆನ್ಸ್ ಅವರ ತಮಿಳು ಸೂಪರ್ ಹಿಟ್ 'ಕಾಂಚನಾ-2' ಸಿನೆಮಾದ ರಿಮೇಕ್ ಇದಾಗಿದ್ದು, ಉಪೇಂದ್ರ ಅವರು ಎರಡು ಅವತಾರಗಳಲ್ಲಿ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 
ಉಪೇಂದ್ರ ಜೊತೆಗೆ ಈ ಸಿನೆಮಾದಲ್ಲಿ ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ನಟಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಎಂ ಆರ್ ಸೀನು ಛಾಯಾಗ್ರಹಣ ಮಾಡುತ್ತಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ