ಬೆಂಗಳೂರು: ಸದ್ಯಕ್ಕೆ ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ದುನಿಯಾ ವಿಜಯ್ ಜೊತೆ ಜೊತೆಗೇ 'ಕಾಟನ್ ಪೇಟೆ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಸಿನೆಮಾವನ್ನು ಸುಧೀಂದ್ರ ನಿರ್ಮಿಸುತ್ತಿದ್ದು, ಓಂ ಪ್ರಕಾಶ್ ರಾವ್ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.
ಮೊದಲಿಗೆ ಈ ಸಿನೆಮಾದ ಮುಹೂರ್ತವನ್ನು ಆಗಸ್ಟ್ 12 ಕ್ಕೆ ಘೋಷಿಸಲಾಗಿತ್ತು, ಆದರೆ ಇದನ್ನು ಗುರುಪೂರ್ಣಿಮೆಯ ದಿನಕ್ಕೆ ಹಿಂದೂಡಲಾಗಿದೆ. " ನಾವು 'ಕಾಟನ್ ಪೇಟೆ' ಮುಹೂರ್ತವನ್ನು ಪವಿತ್ರ ದಿನದಂದು ನೆರವೇರಿಸಲು ನಿಶ್ಚಯಿಸಿದೆವು" ಎಂದು ಸುಧೀಂದ್ರ ಹೇಳಿದ್ದಾರೆ.
"ವಿಜಯ್ ಸದ್ಯಕ್ಕೆ 'ಮಾಸ್ತಿಗುಡಿ' ಸಿನೆಮಾದಿಂದ 35 ದಿನಗಳ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಮಳೆ ನಿಂತ ನಂತರವಷ್ಟೇ ಅವರು ಚಿತ್ರೀಕರಣ ಮತ್ತೆ ಪ್ರಾರಂಭಿಸಲಿದ್ದಾರೆ.ಆದುದರಿಂದ ಆ ದಿನಗಳನ್ನು ನಮ್ಮ ಸಿನೆಮಾಗೆ ಬಳಸಿಕೊಳ್ಳಲು ನಿರ್ಧರಿಸಿದೆವು. ಮುಖ್ಯ ನಟಿ ಪಾರುಲ್ ಯಾದವ್ ಕೂಡ ಈ ಸಮಯದಲ್ಲಿ ದಿನಾಂಕ ಹೊಂದಿಸಿಕೊಳ್ಳಲು ಸಾಧ್ಯವಾದ್ದರಿಂದ ಇದಕ್ಕೆ ಅವಕಾಶವಾಯಿತು" ಎನ್ನುತ್ತಾರೆ ನಿರ್ಮಾಪಕ ಸುಧೀಂದ್ರ.
ಇದಕ್ಕೂ ಮುಂಚಿನ ವರದಿಗಳ ಪ್ರಕಾರ 'ಕಾಟನ್ ಪೇಟೆ' ಸಿನೆಮಾವನ್ನು ಆದಿತ್ಯ ಅವರಿಗಾಗಿ ಓಂ ಪ್ರಕಾಶ್ ನಿರ್ದೇಶಿಸಬೇಕಿತ್ತು. ಆದರೆ ಈಗ ಕೈಬದಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos