ಕಾಳಿ ಅವತಾರದಲ್ಲಿ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಕಾಳಿ ಅವತಾರದಲ್ಲಿ ಶೃತಿ ಹರಿಹರನ್

ಚೊಚ್ಚಲ ನಿರ್ದೇಶಕ ಪ್ರದೀಪ್ ವರ್ಮಾ ಅವರ ಸಿನೆಮಾ 'ಊರ್ವಿ'ಯಲ್ಲಿ ಕಲಾತ್ಮಕ ನೋಟ ಕಾಣುವಂತಹ ಸ್ಟಿಲ್ ಗಳು ಈಗ ಲಭ್ಯವಾಗಿವೆ. ಶೃತಿ ಹರಿಹರನ್ ಊರ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ಚೊಚ್ಚಲ ನಿರ್ದೇಶಕ ಪ್ರದೀಪ್ ವರ್ಮಾ ಅವರ ಸಿನೆಮಾ 'ಊರ್ವಿ'ಯಲ್ಲಿ ಕಲಾತ್ಮಕ ನೋಟ ಕಾಣುವಂತಹ ಸ್ಟಿಲ್ ಗಳು ಈಗ ಲಭ್ಯವಾಗಿವೆ. ಶೃತಿ ಹರಿಹರನ್ ಊರ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
"ಅವರು ಊರ್ವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ" ಎನ್ನತ್ತಾರೆ ನಿರ್ದೇಶಕ. ಊರ್ವಿ ಕಾಳಿಯ ಮುಖ, ಶಕ್ತಿಯ ಅವತಾರ ಎನ್ನುತ್ತಾರೆ. 
ಇದು ದೇವಿಯ ಬಗ್ಗೆ ಚಿತ್ರವಲ್ಲ ಆದರೆ ಕಲಾತ್ಮಕವಾಗಿ ರೂಪಕವಾಗಿ ಕಟ್ಟಿಕೊಡಲಾಗಿರುವ ಚಿತ್ರ ಎನ್ನುತ್ತಾರೆ ನಿರ್ದೇಶಕ. ಶೃತಿ ಈ ಅವತಾರದಲ್ಲಿ ಕಾಣಿಸಿಕೊಳ್ಳಲು ಮೂರು ಘಂಟೆಯವರೆಗೆ ಮೇಕ್-ಅಪ್ ನಲ್ಲಿ ತೊಡಗಿಸಿಕೊಳ್ಳಬೇಕಾಯಿತಂತೆ. 
ಊರ್ವಿ ಮುಖದ ತತ್ವದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರದೀಪ್ "ಊರ್ವಿಯ ಮತ್ತೊಂದು ಹೆಸರು ಕಾಳಿ. 'ಸತ್ಯಕ್ಕೆ' ಮತ್ತೊಂದು ಸಾಂಕೇತಿಕ ಅರ್ಥ. ನಮ್ಮ ಗ್ಯಾಲೆಕ್ಸಿಯಿಂದಾಚೆಗೆ ಸಂಪೂರ್ಣ ಕತ್ತಲೆ" ಎನ್ನುವ ನಿರ್ದೇಶಕ ಈ ಕಟ್ಟಲೆಯಿಂದಲೇ ಕಾಳಿಯ ಬ್ರಹ್ಮಾಂಡ ನೃತ್ಯ ಹೊರಹೊಮ್ಮುವುದು ಎಂದು ವಿವರಿಸುತ್ತಾರೆ. 
"ನಾವು ಆ ತಾಯಿಯ ಗರ್ಭಕೋಶದಲ್ಲಿ ಅಸ್ತಿತ್ವದಲ್ಲಿದ್ದೇವೆ ಮತ್ತು ಅವಳ ನೃತ್ಯದ ಜೊತೆಗೆ ಹೆಜ್ಜೆ ಹಾಕುತ್ತಿದ್ದೇವೆ" ಎಂದು ಕೂಡ ಸೇರಿಸುತ್ತಾರೆ. 
"ಇದು ಕಾಳಿ ಅಥವಾ ಊರ್ವಿಯ ತತತ್ವಶಾಸ್ತ್ರ,. ಆದುದರಿಂದ ಊರ್ವಿಯ ಮುಖ ಹೇಳುವುದೇನೆಂದರೆ ನಾವು ಅವಳ ಒಳಗೆ ಇರುವುದರಿಂದ ಅವಳ ಜೊತೆಗೆ ಸಮರಸದಿಂದರಬೇಕು. ಅವಳಿಗೆ ಬೇಕಾದ್ದನ್ನು ಯಾವಾಗ ಬೇಕಾದರೂ ಎಂದಾದರೂ ಮಾಡಬಹುದು" ಎನ್ನುತ್ತಾರೆ ಪ್ರದೀಪ್. 
ಶೃತಿ ಜೊತೆಗೆ ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ಈ ಸಿನೆಮಾದಲ್ಲಿ ನಟಿಸಿದ್ದು, ಸದ್ಯಕ್ಕೆ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ಪ್ರದೀಪ್ ನಿರತರಾಗಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT