ನಟ-ನಿರ್ದೇಶಕ ರವಿಚಂದ್ರನ್ 
ಸಿನಿಮಾ ಸುದ್ದಿ

'ಅಪೂರ್ವ' ಒಳ್ಳೆಯ ಸಿನೆಮಾ ಇಲ್ಲದಿರಬಹುದು, ಕೆಟ್ಟ ಸಿನೆಮಾ ಅಂತೂ ಅಲ್ಲ: ರವಿಚಂದ್ರನ್

ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಇತ್ತೀಚಿನ ಚಿತ್ರ 'ಅಪೂರ್ವ'ದ ಮೊದಲ ೨೦ ನಿಮಿಷಕ್ಕೆ ಕತ್ತರಿ ಹಾಕಿ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಇತ್ತೀಚಿನ ಚಿತ್ರ 'ಅಪೂರ್ವ'ದ ಮೊದಲ ೨೦ ನಿಮಿಷಕ್ಕೆ ಕತ್ತರಿ ಹಾಕಿ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿದ್ದಾರೆ.

ಮಿಶ್ರ ಪ್ರತಿಕ್ರಿಯೆಗಳಿಗೆ ಸಿದ್ಧರಿದ್ದ ನಟ-ನಿರ್ದೇಶಕ, ಸಿನೆಮಾದ ಎರಡು ಆವೃತ್ತಿಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರಂತೆ. "ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಮೊದಲ ಆವೃತ್ತಿ ಹಾಗೂ ಬಿ ಮತ್ತು ಸಿ ಕೇಂದ್ರಗಳಲ್ಲಿ ದ್ವಿತೀಯ ಆವೃತ್ತಿ ಬಿಡುಗಡೆ ಮಾಡಲು ಮೊದಲು ಯೋಜಿಸಿದ್ದೆ" ಎನ್ನುತ್ತಾರೆ ರವಿಚಂದ್ರನ್.  

ನನಗೆ ಮಾಮೂಲಿ ನಿರೀಕ್ಷೆಗಳನ್ನು ತಣಿಸುವ ಉತ್ಸಾಹ ಇರಲಿಲ್ಲ ಎನ್ನುವ ಅವರು "ಈ ಸಿನೆಮಾ ಕೂಡಲೇ ಹಿಟ್ ಆಗುವ ಭರವಸೆ ಇರಲಿಲ್ಲ. 'ಅಪೂರ್ವ' ಪ್ರಯೋಗಾತ್ಮಕ ಸಿನೆಮಾ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ. ನಾನು ಒಳ್ಳೆ ಸಿನೆಮಾ ಮಾಡಿಲ್ಲದೆ ಇರಬಹುದು ಆದರೆ ಇದು ಕೆಟ್ಟ ಸಿನೆಮಾ ಅಂತೂ ಅಲ್ಲ. 'ಏಕಾಂಗಿ' ಮಾಡಿದ್ದಕ್ಕೆ ವಿಷಾದವಿದೆ; 'ಅಪೂರ್ವ' ಗೆ ಅಲ್ಲ" ಎನ್ನುತ್ತಾರೆ ರವಿಚಂದ್ರನ್.

೩೩ ವರ್ಷಗಳ ದೀರ್ಘ ಕಾಲದವರೆಗೆ ಸಿನೆಮಾರಂಗದಲ್ಲಿ ತೊಡಗಿಸಿಕೊಂಡಿರುವ ರವಿಚಂದ್ರನ್ "ಸಿನೆಮಾ ನನಗೆ ಜೀವನ ನೀಡಿದೆ. ನಾನು 'ಮಲ್ಲ' ರೀತಿಯ ಸಿನೆಮಾಗಳನ್ನು ಮಾಡಬಹುದಿತ್ತು ಆದರೆ ಆ ರೀತಿಯ ಸಿನೆಮಾಗಳಿಂದ ದೂರ ಬರಲು ನಿಶ್ಚಯಿಸಿದೆ" ಎನ್ನುತ್ತಾರೆ.

ಇತರರ ಅಭಿಪ್ರಾಯಗಳಿಂದ ಪ್ರಭಾವಕ್ಕೆ ಒಳಗಾಗದಂತೆ ಪ್ರೇಕ್ಷಕರಿಗೆ ಮೊರೆ ಇಡುವ ರವಿಚಂದ್ರನ್ "ನಾನು ಸಿನೆಮಾ ನಿರ್ದೇಶಿಸಿಲ್ಲ, ಆದರೆ ವಿನ್ಯಾಸ ಮಾಡಿದ್ದೇನೆ. ಪ್ರತಿ ಫ್ರೇಮ್ ಗಾಗಿ ನಾನು ತೆಗೆದುಕೊಂಡಿರುವ ಕಷ್ಟ ಎಲ್ಲರಿಗೂ ತಿಳಿಯುತ್ತದೆ ಎಂಬ ಆತ್ಮವಿಶ್ವಾಸ ಇದೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT