ವಟರಾಜ ಸರ್ವೀಸ್ ಚಿತ್ರದಲ್ಲಿ ನಟ ಶರಣ್ 
ಸಿನಿಮಾ ಸುದ್ದಿ

ಭಿಕ್ಷುಕನಂತೆ ಮಾರುವೇಷ ಧರಿಸಿ 128 ರು. ಸಂಗ್ರಹಿಸಿದ ನಟ ಶರಣ್

ನಟರಾಜ ಸರ್ವಿಸ್ ಚಿತ್ರಕ್ಕಾಗಿ ನಟ ಶರಣ್ ವೇಷ ಮರೆಸಿಕೊಂಡು ಬೆಂಗಳೂರಿನ ಗಾಂಧಿ ಬಜಾರಲ್ಲಿ ಕೂತು ಚಿತ್ರದ ಪ್ರಮುಖ ಗೀತೆಯನ್ನು ಹಾಡಿದ್ದಾರೆ. ..

ಬೆಂಗಳೂರು: ನಟರಾಜ ಸರ್ವಿಸ್ ಚಿತ್ರಕ್ಕಾಗಿ ನಟ ಶರಣ್ ವೇಷ ಮರೆಸಿಕೊಂಡು ಬೆಂಗಳೂರಿನ ಗಾಂಧಿ ಬಜಾರಲ್ಲಿ ಕೂತು ಚಿತ್ರದ ಪ್ರಮುಖ ಗೀತೆಯನ್ನು ಹಾಡಿದ್ದಾರೆ.

ಚಿತ್ರದ ಪ್ರಮೋಷನಲ್ ಗೀತೆಗಾಗಿ ನಟ ಶರಣ್ ಭಿಕ್ಷುಕನಂತೆ ವೇಷ ಧರಿಸಿ, ಗಾಂಧಿ ಬಜಾರ್, ಹನುಮಂತನಗರ ಸುತ್ತಮುತ್ತಹಾಡು ಹೇಳಿಕೊಂಡು ಅಲೆದಾಡಿದ್ದಾರೆ.  ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇನ್ನು ಗಾಂಧಿ ಬಜಾರ್‌‌‌ನಲ್ಲಿ ಈ ಗೆಟಪ್‌‌ನಲ್ಲಿರುವುದು ಶರಣ್ ಎಂದು ಸಾಮಾನ್ಯ ಜನರಿಗೆ ಗೊತ್ತಾಗಿಲ್ಲ. ಆತ ಭಿಕ್ಷುಕ ಎಂದು ತಿಳಿದು ಹಲವರು ಹಣ ಕೂಡ ಹಾಕಿದ್ದಾರೆ. ಇದನ್ನು ಶರಣ್‌‌ ಸಖತ್ ಎಂಜಾಯ್ ಕೂಡ ಮಾಡಿದರಂತೆ.

ಈ ಹೊಸ ಪ್ರಯತ್ನವನ್ನು ಶರಣ್‌‌ ಸಾಂಡಲ್‌‌ವುಡ್‌ನಲ್ಲಿ ಹುಟ್ಟುಹಾಕಿದ್ದಾರೆ. ಯಾರಿಗೂ ಭಿಕ್ಷುಕನ ವೇಶದಲ್ಲಿರುವುದು ಶರಣ್ ಎಂದು ಗೊತ್ತಾಗಲಿಲ್ಲ. ಒಂದಿಡಿ ದಿನ ನಡೆದ ಶೂಟಿಂಗ್ ನಲ್ಲಿ  ಒಬ್ಬ ವ್ಯಕ್ತಿ ಶರಣ್ ಅವರನ್ನು ಗುರುತಿಸಿಬಿಟ್ರು. ನಂತರ ನಾವು ಅಲ್ಲಿಂದ ತೆರಳಿದೆವು ಎಂದು ನಿರ್ದೇಶಕ ಪವನ್ ಒಡೆಯರ್ ತಮ್ಮ ಅನುಭವ ಹೇಳುತ್ತಾರೆ.

ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ  ಚಿತ್ರದಲ್ಲಿ ಶರಣ್‌‌ಗೆ ಮಯೂರಿ ನಾಯಕಿಯಾಗಿದ್ದು, ವಿಭಿನ್ನ ಕಥಾ ಹಂದರವನ್ನು ಚಿತ್ರ ಹೊಂದಿದೆ. ಹೀಗಾಗಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT