'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್ 
ಸಿನಿಮಾ ಸುದ್ದಿ

'ಚಕ್ರವರ್ತಿ'ಗಾಗಿ ಗಂಭೀರನಾದ ಸೃಜನ್

ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ

ಬೆಂಗಳೂರು: ನಟ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದರೆ ತಟ್ಟನೆ ನೆನಪಾಗುವದು ಹಾಸ್ಯ. ಆದರೆ ಅವರು ತಮ್ಮ ಗೆಳೆಯ ನಟ ದರ್ಶನ್ ಜೊತೆಗೆ ನಟಿಸುತ್ತಿರುವ ಮುಂದಿನ ಚಿತ್ರ 'ಚಕ್ರವರ್ತಿ'ಯಲ್ಲಿ ಗಂಭೀರ ಪಾತ್ರ ನಿರ್ವಹಿಸಲಿದ್ದಾರೆ.

ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ 'ಎದೆಗಾರಿಕೆ'ಯ ನಂತರ ಮತ್ತೆ ಅಂತಹುದೊಂದು ಪಾತ್ರ ನಿರ್ವಹಿಸಲಿದ್ದಾರೆ.

"ನನ್ನ ಆದ್ಯತೆ ಎಂದಿಗೂ ಜನರನ್ನು ನಗಿಸುವುದು. ಅದರ ಜೊತೆಗೂ ಗಂಭೀರವಾದ ಪಾತ್ರಗಳು ಕೂಡ ನನಗೆ ಹೆಸರು ತಂದುಕೊಟ್ಟಿವೆ. ಅದಕ್ಕೆ ಉದಾಹರಣೆ 'ಎದೆಗಾರಿಕೆ'. ಅಂತಹ ಪಾತ್ರಗಳು ನಟನಲ್ಲಿನ ಬಹುಮುಖ ಸಾಮರ್ಥ್ಯವನ್ನು ಹೊರತರುತ್ತವೆ" ಎನ್ನುತ್ತಾರೆ ಸೃಜನ್.

ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟ ದರ್ಶನ್ ಮತ್ತು ನಟಿ ದೀಪಾ ಸನ್ನಿಧಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

"ನಾನು ಮತ್ತು ದರ್ಶನ್ ಒಟ್ಟಿಗೆ ನಟಿಸಿದ ಚಿತ್ರಗಳು ಗೆಲ್ಲಬೇಕೆಂಬ ಅಸೆ ನನಗೆ. ಅವರ ಜೊತೆಗೆ ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದರು ಜಗ್ಗುದಾದಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಕೆಲಸ ಮಾಡಿದೆ" ಎನ್ನುವ ಅವರು 'ಚಕ್ರವರ್ತಿ'ಯಲ್ಲೂ ಇವರಿಬ್ಬರು ಗೆಳೆಯರಂತೆ.

ಭೂಗತ ಲೋಕದ ಕಥಾ ಹಂದರ ಹೊಂದಿರುವ 'ಚಕ್ರವರ್ತಿ'ಯಲ್ಲಿ ನಟ ದರ್ಶನ್ ಅವರ ಸಹೋದರ ದಿನಕರ್ ಖಳನಾಯಕನ ಪಾತ್ರ ನಿರ್ವಹಿಸಿದ್ದರೆ, ನಟ ಆದಿತ್ಯ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT