ಸಂಗೀತ ನಿರ್ದೇಶಕ ಹಂಸಲೇಖ ಮತ್ತು ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

ಹಂಸಲೇಖ ಸೇರಿದಂತೆ 'ಕಲಿ'ಗೆ ಆರು ಸಂಗೀತ ನಿರ್ದೇಶಕರು

ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸಲಿರುವ ಪ್ರೇಮ್ ನಿರ್ದೇಶನದ 'ಕಲಿ' ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು ಇಂದಿನಿಂದ ನಿರ್ಮಾಣ ಕಾರ್ಯಗಳು

ಬೆಂಗಳೂರು: ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸಲಿರುವ ಪ್ರೇಮ್ ನಿರ್ದೇಶನದ 'ಕಲಿ' ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು ಇಂದಿನಿಂದ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಲಿವೆ.

ಇತ್ತೀಚೆಗಷ್ಟೇ ಮಂತ್ರಾಲಯದ ದೇವಾಲಯಕ್ಕೆ ಹೋಗಿ ನಿರ್ದೇಶಕ ಪೂಜೆ ಸಲ್ಲಿಸಿದ್ದಾರಂತೆ. ಮತ್ತು ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಈ ಸಿನೆಮಾಗ ಆರು ಜನ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದು, ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಹಾಡಿನ ರೆಕಾರ್ಡಿಂಗ್ ಕೆಲಸಗಳು ಪ್ರಾರಂಭವಾಗಲಿವೆಯಂತೆ .

"ಹಂಸಲೇಖ ಚಿತ್ರತಂಡದ ಭಾಗವಾಗಿರುವುದು, ಕನಸು ನನಸಾದಂತೆ. ನಾನು ಇಂದು ಅಲ್ಪ ಸ್ವಲ್ಪ ಸಂಗೀತದ ಕಲಿತಿರುವುದಾದರೆ, ಅದು ಹಂಸಲೇಖ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಕೇಳಿಯೇ. 'ಕಲಿ'ಗೆ ಮುಂಚಿತವಾಗಿಯೂ ಹಲವಾರು ಬಾರಿ ಅವರನ್ನು ಕೇಳಿಕೊಂಡಿದ್ದೆ ಆದರೆ ಯಶಸ್ವಿಯಾಗಿರಲಿಲ್ಲ. ಇಂದಿನ ಪೀಳಿಗೆಗೆ ಟ್ಯೂನ್ ಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ನಿರಾಕರಿಸಿದ್ದರು. ಈ ಬಾರಿ ಅವರನ್ನು ೧೫ ನಿಮಿಷಗಳವರೆಗೆ ಭೇಟಿ ಮಾಡಿ ಒಪ್ಪಿಸಿದೆ" ಎನ್ನುತಾರೆ ಪ್ರೇಮ್.

"ಅವರು ಸಿನೆಮಾದ ಪರಿಚಯಾತ್ಮಕ ಹಾಡಿಗೆ ಸಂಗೀತ ನೀಡಲಿದ್ದು, ಆ ಹಾಡಿನಿಂದಲೇ ಸಿನೆಮಾ ಪ್ರಾರಂಭವಾಗಲಿದೆ. ನನಗೆ ಎಲ್ಲ ಸಂಗೀತ ನಿರ್ದೇಶಕರು ಗೆಳೆಯರೇ ಆದರೆ ಹಂಸಲೇಖ ಅವರ ರೀತಿಯಲ್ಲಿ ಯಾರಿಗೂ ಹಾಡುಗಳನ್ನು ನೀಡಲು ಸಾಧ್ಯವಿಲ್ಲ. ಈಗ 'ಕಲಿ' ಇತಿಹಾಸವಾಗಿರುವುದರಿಂದ ಅದಕ್ಕೆ ಹಂಸಲೇಖ ಸರಿಯಾಗಿ ಹೊಂದಿಕೊಳ್ಳುತ್ತಾರೆ" ಎನ್ನುತ್ತಾರೆ ನಿರ್ದೇಶಕ.

ಹಂಸಲೇಖ ಅವರು ಸಂಗೀತ ನೀಡಿರುವ ಹಾಡು ಲಂಡನ್ನಿನಲ್ಲಿ ಮಿಕ್ಸ್ ಆಗಲಿದೆಯಂತೆ, ಅದಕ್ಕಾಗಿ ೩೦೦ ಜನ ಸಂಗೀತಕಾರರು ಆರ್ಕೆಸ್ಟ್ರಾದಲ್ಲಿ ಪಾಲ್ಗೊಳ್ಳಲಿದ್ದು, ಕನ್ನಡ ಸಿನೆಮಾದಲ್ಲಿ ಇದು ಮೊದಲು ಎನ್ನಿತ್ತಾರೆ ಪ್ರೇಮ್.

"ನೋಟ್ಸ್ ಕಂಪೋಸ್ ಮಾಡಿದ ಮೇಲೆ ನಾನು ಮತ್ತು ಹಂಸಲೇಖ ಲಂಡನ್ ಗೆ ತೆರಳಲಿದ್ದೇವೆ. ಅಂತರಾಷ್ಟ್ರೀಯ ಗುಣಮಟ್ಟದ ಸಂಗೀತ ಹೊರತರಬೇಕೆಂಬುದು ನನ್ನ ಆಸೆ" ಎನ್ನುತ್ತಾರೆ ಅವರು.

ಹಂಸಲೇಖ ಅಲ್ಲದೆ, ಸಾಧು ಕೋಕಿಲಾ, ಗುರುಕಿರಣ್. ವಿ ಹರಿಕೃಷ್ಣ, ಅರ್ಜುನ್ ಜನ್ಯ ಮತ್ತು ಅನೂಪ್ ಸೀಳಿನ್ ಸಿನೆಮಾಗೆ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT