'ಕೋಟಿಗೊಬ್ಬ-೨' ಸಿನೆಮಾದಲ್ಲಿ ಸುದೀಪ್ 
ಸಿನಿಮಾ ಸುದ್ದಿ

ಐಪಿಎಲ್ ಜೊತೆ ಜಟಾಪಟಿಗೆ ಬಿಗ್ ಬಜೆಟ್ ಸಿನೆಮಾಗಳು ಸಜ್ಜು

ಸಾಮಾನ್ಯವಾಗಿ ಕ್ರಿಕೆಟ್ ಸರಣಿಗಳು ನಡೆಯುವಾಗ ಬಹು ನಿರೀಕ್ಷಿತ ದೊಡ್ಡ ಬಜೆಟ್ ಸಿನೆಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡುವುದು ವಾಡಿಕೆ. ಆದರೆ ಬರಲಿರುವ

ಬೆಂಗಳೂರು: ಸಾಮಾನ್ಯವಾಗಿ ಕ್ರಿಕೆಟ್ ಸರಣಿಗಳು ನಡೆಯುವಾಗ ಬಹು ನಿರೀಕ್ಷಿತ ದೊಡ್ಡ ಬಜೆಟ್ ಸಿನೆಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡುವುದು ವಾಡಿಕೆ. ಆದರೆ ಬರಲಿರುವ ಐ ಪಿ ಎಲ್ ಸಮಯದಲ್ಲೇ ಹಲವಾರು ಜನಪ್ರಿಯ ಸಿನೆ ತಾರೆಯರ ಸಿನೆಮಾಗಳು ಬಿಡುಗಡೆಗೆ ಸಜ್ಜಾಗುತ್ತಿರುವುದು ವಿಶೇಷ.

ಪುನೀತ್ ರಾಜಕುಮಾರ್ ನಟಿಸಿರುವ 'ಚಕ್ರವ್ಯೂಹ' ಏಪ್ರಿಲ್ ೮ಕ್ಕೆ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕರು. ಅಂದೇ ಐಪಿಲ್ ೯ ನೆ ಆವೃತ್ತಿಯ ಉದ್ಘಾಟನಾ ಸಮಾರಂಭವಿದೆ. ಏಪ್ರಿಲ್ ಕೊನೆಯ ಭಾಗಕ್ಕೆ ಸುದೀಪ್ ನಟನೆಯ 'ಕೋಟಿಗೊಬ್ಬ-೨' ಕೂಡ ಬಿಡುಗಡೆಯಾಗಲಿದೆ. ಕೆ ಎಸ್ ರವಿಕುಮಾರ್ ನಿರ್ದೇಶನದ ಈ ಸಿನೆಮಾ ದ್ವಿಭಾಷಾ ಚಲನಚಿತ್ರವಾಗಿದ್ದು, ತಮಿಳಿನಲ್ಲಿ 'ಮುದಿಂಜ ಇವನೈ ಪುಡಿ' ಎಂದು ಬಿಡುಗಡೆಯಾಗಲಿದೆ. ದರ್ಶನ್ ನಟಿಸಿರುವ 'ಜಗ್ಗು ದಾದ' ಮಾತ್ರ ಐಪಿಲ್ ಮುಗಿದು ಮೇ ನಲ್ಲಿ ಬಿಡುಗಡೆಯಾಗಲಿದೆ. ಕ್ರಿಕೆಟ್ ಸರಣಿ ಇದ್ದರೂ, ಬೇಸಿಗೆ ರಜವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಮಾಪಕರು ಕ್ರಿಕೆಟ್ ಗೆ ಅಂಜದೆ ಸಿನೆಮಾಗಳ ಬಿಡುಗಡೆಗೆ ಮುಂದಾಗಿದ್ದಾರೆ.

'ಚಕ್ರುವ್ಯೂಹ'ವನ್ನು ಬಿಡುಗಡೆ ಮಾಡಲಿರುವ ನಿರ್ಮಾಪಕ ಎನ್ ಕೆ ಲೋಹಿತ್ ಹೇಳುವಂತೆ "ಏಪ್ರಿಲ್ ನಲ್ಲಿ ಬೇಸಿಗೆ ರಜಗಳು ಪ್ರಾರಂಭವಾಗಲಿವೆ. ಕ್ರಿಕೆಟ್ ಹುಚ್ಚರಂತೆ ಪುನೀತ್ ರಾಜಕುಮಾರ್ ಅವರನ್ನು ನೋಡಲು ಸಿನೆಮಾ ಅಭಿಮಾನಿಗಳು ಸಮಯ ಮಾಡಿಕೊಳ್ಳಲಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಸಿನೆಮಾಗಳಲ್ಲೊಂದು" ಎನ್ನುತ್ತಾರೆ.

'ಕೋಟಿಗೊಬ್ಬ ೨' ಸಿನೆಮಾದ ನಿರ್ಮಾಪಕ ಸೂರಪ್ಪ ಬಾಬು ಪ್ರಕಾರ "ಇಂದು ಜನ ಐಪಿಎಲ್ ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಈಗ ಅದು ಆಟವಾಗಿಲ್ಲ ಬದಲಾಗಿ ಜನ ಅದನ್ನು ಜೂಜು ಎಂದೇ ನಂಬಿದ್ದಾರೆ. ಕ್ವಾರ್ಟರ್ ಫೈನಲ್ಸ್ ನಂತರ ಐಪಿಎಲ್ ಹುಚ್ಚು ತುಸು ಗರಿಗೆದರಬಹುದು" ಎನ್ನುತ್ತಾರೆ.

ಈ ಮಧ್ಯೆ ಶರಣ್ ನಟಿಸಿರುವ 'ಜೈ ಮಾರುತಿ ೮೦೦', ಗಣೇಶ್ ನಟನೆಯ 'ಸ್ಟೈಲ್ ಕಿಂಗ್' ಮತ್ತು ರಕ್ಷಿತ್ ಶೆಟ್ಟಿ ನಟನೆಯ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಕೂಡ ಬಿಡುಗಡೆಗೆ ಸಿದ್ಧವಾಗಿವೆ ಆದರೆ ಬಿಡುಗಡೆ ದಿನಾಂಕ ಅಂತಿಮವಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT