'ಜಗ್ಗು ದಾದಾ' ಸಿನೆಮಾದಲ್ಲಿ ನಟ ದರ್ಶನ್ 
ಸಿನಿಮಾ ಸುದ್ದಿ

'ಜಗ್ಗು ದಾದಾ' ಕ್ಲೈಮ್ಯಾಕ್ಸ್ ದುಬಾರಿ ಮತ್ತು ಹಾಸ್ಯಮಯ!

ದರ್ಶನ್ ಅವರ ಮುಂದಿನ ಚಿತ್ರ 'ಜಗ್ಗು ದಾದಾ' ಕ್ಲೈಮ್ಯಾಕ್ಸ್ ಗೆ ಈಗಲ್ಟನ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಸಿನೆಮಾದ ನಿರ್ಮಾಪಕ-ನಿರ್ದೇಶಕ ರಾಘವೇಂದ್ರ ಹೆಗಡೆಯವರ ಪ್ರಕಾರ

ಬೆಂಗಳೂರು: ದರ್ಶನ್ ಅವರ ಮುಂದಿನ ಚಿತ್ರ 'ಜಗ್ಗು ದಾದಾ' ಕ್ಲೈಮ್ಯಾಕ್ಸ್ ಗೆ ಈಗಲ್ಟನ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಸಿನೆಮಾದ ನಿರ್ಮಾಪಕ-ನಿರ್ದೇಶಕ ರಾಘವೇಂದ್ರ ಹೆಗಡೆಯವರ ಪ್ರಕಾರ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣಕ್ಕಾಗಿಯೇ ೧.೨೫ ಕೋಟಿ ರೂ ವ್ಯಯಿಸುತ್ತಿದ್ದಾರಂತೆ. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಇಡೀ ಚಿತ್ರತಂಡ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಗಾಲ್ಫ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದೆ.

"ಕ್ಲೈಮ್ಯಾಕ್ಸ್ ಹಾಸ್ಯಮಯವಾಗಿರುತ್ತದೆ" ಎನ್ನುತ್ತಾರೆ ಹೆಗಡೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು ಎನ್ನುವ ನಿರ್ದೇಶಕ ಕ್ಲೈಮ್ಯಾಕ್ಸ್ ಚಿತ್ರೀಕರ್ಣಕ್ಕಾಗಿ ಹಾಕಿರುವ ಸೆಟ್ ವೆಚ್ಚವೇ ೩೦ ಲಕ್ಷ ಎಂದಿದ್ದಾರೆ. ರೆಸಾರ್ಟ್ ಬಾಡಿಗೆ ದಿನಕ್ಕೆ ೨ ಲಕ್ಷ ಇದ್ದು ಏಳು ದಿನಗಳ ಚಿತ್ರೀಕರಣ ನಡೆಸಲಿದ್ದಾರಂತೆ.  "ಕ್ಲೈಮ್ಯಾಕ್ಸ್ ಆಕ್ಷನ್ ದೃಶ್ಯಗಳನು ನಿರ್ದೇಶಿಸಲು ನಾವು ಸ್ಟಂಟ್ ಮಾಸ್ಟರ್ ಮಾಫಿಯಾ ಶಶಿ ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ಸಾಮಾನ್ಯವಾಗಿ ಪ್ರಿಯದರ್ಶನ್ ಅವರ ಎಲ್ಲ ಸಿನೆಮಾಗಳ ಭಾಗವಾಗಿರುತ್ತಾರೆ. ಶಶಿ ಅವರು ೩೦ ಜನ ಫೈಟ್ ಮಾಸ್ಟರ್ ಗಳನ್ನು ಕರೆತಂದಿದ್ದಾರೆ. ಏಳು ದಿನಗಳಿಗೆ ೫೦೦ ಜನ ಕಿರಿಯ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ. ಇವೆಲ್ಲದ್ದಕ್ಕೂ ಒಟ್ಟು ೧.೨೫ ಕೋಟಿ ವೆಚ್ಚವಾಗುತ್ತಿದೆ" ಎಂದಿದ್ದಾರೆ ನಿರ್ದೇಶಕ. ಭಾನುವಾರ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಸಿ ಉಳಿದೆರಡು ಹಾಡುಗಳ ಚಿತ್ರೀಕರಣಕ್ಕೆ ಇಟಲಿಗೆ ತೆರಳಲಿದೆಯಂತೆ.

ಏಪ್ರಿಲ್ ೫ ಕ್ಕೆ ಹಿಂದಿರುಗಿ ಯಾವುದೇ ವಿರಾಮವಿಲ್ಲದಂತೆ ಉಳಿದ ಚಿತ್ರೀಕರಣವನ್ನು ಮಾಡಿ ಮುಗಿಸಲಿದೆಯಂತೆ ಚಿತ್ರತಂಡ. "ಏಪ್ರಿಲ್ ೧೦ರ ಹೊತ್ತಿಗೆ ಚಿತ್ರೀಕರಣವನ್ನು ಸಂಪೂರ್ಣಗೊಳಿಸುವ ಇರಾದೆಯಿದೆ. ನಂತರ ಡಬ್ಬಿಂಗ್-ಎಡಿಟಿಂಗ್ ಕೆಲಸಗಳು ನಡೆಯಲಿವೆ, ಮೇ ಹೊತ್ತಿಗೆ ಸಿನೆಮಾ ಬಿಡುಗಡೆ ಮಾಡುವ ಭರವಸೆಯಿದೆ" ಎನ್ನುತ್ತಾರೆ ಹೆಗಡೆ.

ವಿ ಹರಿಕೃಷ್ಣ ಸಂಗೀತ ನೀಡಿದ್ದು, ಅನಿಕೇತ್ ಸಿನೆಮ್ಯಾಟೋಗ್ರಾಫರ್. ಮುಂದಿನ ತಿಂಗಳು ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ ಚಿತ್ರತಂಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT