ಸಿನಿಮಾ ಸುದ್ದಿ

ಮತ್ತೆ ತೆರೆಗೆ ಅಣ್ಣಾವ್ರ ಬಬ್ರುವಾಹನ

Vishwanath S

ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ ಡಾ. ರಾಜ್ ಕುಮಾರ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಬಬ್ರುವಾಹನ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ.

ಏಪ್ರಿಲ್ 24 ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರ ಸವಿ ನೆನಪಿಗಾಗಿ ಏಪ್ರಿಲ್ 22 ರಂದು ಬಬ್ರುವಾಹನ ಚಿತ್ರ ಬಿಡುಗಡೆಯಾಗಲಿದೆ.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 1977ರಲ್ಲಿ ಬಿಡುಗಡೆಯಾಗಿದ್ದ ಪೌರಾಣಿಕ ಚಿತ್ರ ಬಬ್ರುವಾಹನ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡ ಅವರ ಪುತ್ರ ಕೆಸಿಎನ್ ಮೋಹನ್ ಅವರು ಚಿತ್ರಕ್ಕೆ ಹೊಸ ರೂಪ ಕೊಟ್ಟು ಬಿಡುಗಡೆಗೆ ಅಣಿಮಾಡಿದ್ದಾರೆ.

ಬಹುತಾರಾಗಣ ಒಳಗೊಂಡಿದ್ದ ಬಬ್ರುವಾಹನ ಚಿತ್ರದಲ್ಲಿ ರಾಜ್ ಕುಮಾರ್ ಸೇರಿದಂತೆ ಬಿ. ಸರೋಜಾ ದೇವಿ, ಕಾಂಚನ, ಜಯಮಾಲ, ವಜ್ರಮುನಿ, ತೂಗದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಮತ್ತು ರಾಮಕೃಷ್ಣ ಅವರು ಅಭಿನಯಿಸಿದ್ದರು.

SCROLL FOR NEXT