ನಿರ್ದೇಶಕ ಪವನ್ ಕುಮಾರ್ ಜೊತೆಗೆ ನಟಿ ಸಮಂತ, ನಟ ನಾಗ ಚೈತನ್ಯ ಮತ್ತು ಸಿನೆಮ್ಯಾಟೋಗ್ರಾಫರ್ ಅಧ್ವೈತ 
ಸಿನಿಮಾ ಸುದ್ದಿ

'ಯು-ಟರ್ನ್' ತಮಿಳು-ತೆಲುಗು ರಿಮೇಕ್ ನಲ್ಲಿ ಸಮಂತ?

ತಮ್ಮ ಆರು ವರ್ಷಗಳ ಅನುಭವದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಳವೂರಿರುವ ಸಮಂತ ರುತ್ ಪ್ರಭು, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ನ ತಮಿಳು ಮತ್ತು ತೆಲುಗು ರಿಮೇಕ್

ಬೆಂಗಳೂರು: ತಮ್ಮ ಆರು ವರ್ಷಗಳ ಅನುಭವದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಳವೂರಿರುವ ಸಮಂತ ರುತ್ ಪ್ರಭು, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ನ ತಮಿಳು ಮತ್ತು ತೆಲುಗು ರಿಮೇಕ್ ಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರಂತೆ.

ಮಾರ್ಚ್ ೧೮ ರಂದು ಬೆಂಗಳೂರಿನಲ್ಲಿದ್ದ ನಟಿ, 'ಯು-ಟರ್ನ್' ಸಿನೆಮಾ ನೋಡಿದ್ದಾರೆ. ಇವರ ಜೊತೆಗೆ ನಟ ನಾಗ ಚೈತನ್ಯ ಕೂಡ ಇದ್ದರಂತೆ. ಇದನ್ನು ಧೃಢೀಕರಿಸಿದ ಪವನ್ "ಟ್ರೇಲರ್ ನೋಡಿದ ಮೇಲೆ ಸಮಂತ ನನ್ನ ಜೊತೆಗೆ ಮಾತನಾಡಿದರು. ಅವರು ಸ್ಕ್ರಿಪ್ಟ್ ಓದಿದ ಮೇಲೆ ಈಗ ಸಿನೆಮಾದ ಪ್ರಿವ್ಯೂ ಕೂಡ ವೀಕ್ಷಿಸಿದ್ದಾರೆ. ಈಗ ಇದನ್ನು ರಿಮೇಕ್ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ" ಎನ್ನುತ್ತಾರೆ.

ನಾಗ ಚೈತನ್ಯ ತಮ್ಮ ಹಿಂದಿನ ಸಿನೆಮಾ 'ಲೂಸಿಯಾ'ದ ಅಭಿಮಾನಿಯಾಗಿರುವುದರಿಂದ ಅವರು ಸಮಂತಾ ಜೊತೆಗೆ ಬಂದು ಸಿನೆಮಾ ವೀಕ್ಷಿಸಿದರು ಎಂದು ತಿಳಿಸುತ್ತಾರೆ ಪವನ್.

ನಿರ್ದೇಶಕ ಈಗ 'ಯು-ಟರ್ನ್' ನಿರ್ಮಾಪಕರ ಜೊತೆ ತೆಲುಗು ಮತ್ತು ತಮಿಳು ರಿಮೇಕ್ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರಂತೆ. "ಸಮಂತ ನಮ್ಮ ಕನ್ನಡ ಸಿನೆಮಾವನ್ನು ತಮಿಳು ಮತ್ತು ತೆಲುಗಿನಲ್ಲಿ ಮಾಡಲು ಆಸಕ್ತಿ ತೋರಿರುವುದು ಒಳ್ಳೆಯ ಸುದ್ದಿ. ಆದರೆ, ನಮಗೆ ನಿರ್ಮಾಪಕರು ಸಿಗಬೇಕು. ಎಲ್ಲವೂ ಅಂತಿಮವಾದ ಮೇಲಷ್ಟೇ ನಾನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯ" ಎಂದಿದ್ದಾರೆ ಪವನ್.

ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್ ಸಿನೆಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT