ಅಧಿತಿ ರಾವ್ 
ಸಿನಿಮಾ ಸುದ್ದಿ

ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಉಳಿಯಲು ಇಚ್ಛಿಸುತ್ತೇನೆ: ಅಕಿರ ನಾಯಕಿ

ಕನ್ನಡದಲ್ಲಿ ಡವ್ ಮತ್ತು ಹುಚ್ಚುಡುಗರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಚಾಪು ಮುಡಿಸಿರುವ ಅಧಿತಿರ ಮೂರನೇ ಚಿತ್ರ ಅಕಿರ ಇನ್ನೇನು ಬಿಡುಗಡೆಗೆ...

ಧಾರಾವಾಹಿಗಳ ಮೂಲಕ ಸ್ಪಾಟ್ ಲೈಟ್ ಗೆ ಬಂದ ಅಧಿತಿ ರಾವ್ ಸಂತು ನಿರ್ದೇಶನದ ಡವ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಅವರ ಅಭಿನಯದ ಅಕಿರ ಚಿತ್ರ ಇದೇ ವಾರ ಬಿಡುಗಡೆಯಾಗಲಿದೆ.

ಕನ್ನಡದಲ್ಲಿ ಡವ್ ಮತ್ತು ಹುಚ್ಚುಡುಗರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಚಾಪು ಮುಡಿಸಿರುವ ಅಧಿತಿರ ಮೂರನೇ ಚಿತ್ರ ಅಕಿರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಬಿಡುಗಡೆ ಕುರಿತಂತೆ ಉತ್ಸುಕತೆಯಲ್ಲಿರುವ ಅಧಿತಿ ಅವರ ಮನದಾಳದ ಮಾತು.

ಅಕಿರ ಚಿತ್ರದ ಕುರಿತು ಅಭಿಮಾನಿಗಳು ಪ್ರತಿಕ್ರಿಯೆ ನೋಡಲು ಹರ್ಷ ಮತ್ತು ಕುತೂಹಲ ಹೊಂದಿದ್ದೇನೆ. ಕೆಟ್ಟ ಚಿತ್ರಗಳನ್ನು ಮಾಡುವ ಮೂಲಕ ನನ್ನ ಬೇಡಿಕೆಯನ್ನು ಕಳೆದುಕೊಳ್ಳದೆ ಉತ್ತಮ ಚಿತ್ರಗಳನ್ನು ಮಾಡುವ ಮೂಲಕ ಬಹಳ ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಉಳಿಯಲು ಇಚ್ಛಿಸುತ್ತೇನೆ ಎಂದರು.

ಮೊದಲ ಬಾರಿಗೆ ಕ್ರಿಷಿ ತಪ್ಪಂದ ಅವರು ಬಂದು ಅಕಿರ ಚಿತ್ರದ ಕಥೆಯನ್ನು ಹೇಳಿದಾಗ ನಾನು ನೋ ಅಂದಿದ್ದೇ, ಆದರೂ ಬಿಡದ ಅವರು ಎರಡನೇ ಬಾರಿಗೆ ನನ್ನ ಬಳಿ ಬಂದಾಗ ನಾನು ಓಕೆ ಅಂದೆ. ನಿಜಕ್ಕೂ ಅವತ್ತು ನಾನು ಒಳ್ಳೆ ತೀರ್ಮಾನ ತೆಗೆದುಕೊಂಡಿದ್ದೇನೆ ಅಂತ ಹೀಗ ಎನ್ನಿಸುತ್ತಿದೆ. ಚಿತ್ರದಲ್ಲಿ ಉತ್ತಮ ಪಾತ್ರ ನೀಡಿದ ನಿರ್ದೇಶಕ ಚೇತನ್ ಹಾಗೂ ನಿರ್ದೇಶಕ ನವೀನ್ ಅವರಿಗೆ ನಾನು ಅಭಾರಿ ಎಂದರು.

ಅಕಿರ ಒಂದು ಅರ್ಥಪೂರ್ಣ ಸಿನಿಮಾ. ಚಿತ್ರದಲ್ಲಿ ಮೂರು ಪಾತ್ರಗಳು ಪ್ರಮುಖವಾಗಿ ಕಾಡುತ್ತದೆ. ಅದು ಅನೀಶ್ ತೇಜಸ್ವರ್, ಕ್ರಿಷಿ ಮತ್ತು ನನ್ನದು. ನನ್ನ ನಂಬಿಕೆ ನಾನೇ ಚಿತ್ರದ ನಿಜವಾದ ಹಿರೋಯಿನ್. ಚಿತ್ರದಲ್ಲಿ ಒಲ್ಡ್ ಎಜ್ ಹೋಮ್ ನಡೆಸುತ್ತಿರುವ ಸಾಹಿತಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ಸ್ವಲ್ಪ ಭಿನ್ನವಾಗಿದೆ ಎಂದರು ಅಧಿತಿ.

ವಿದೇಶದಲ್ಲಿ ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಮಾಡಲಾಯಿತು. ನನ್ನ ಹಾಗೂ ಹಿರೋ ಜತೆಗಿನ ಪ್ರೇಮ ನಿವೇದನೆಯ ಹಾಡನ್ನು ಚಿತ್ರೀಕರಿಸಲಾಯಿತು. ಇನ್ನು ವಿಲಕ್ಷಣ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು ನನಗೆ ಹೊಸ ಅನುಭವ ನೀಡಿದೆ ಎಂದು ಅಧಿತಿ ಹೇಳಿದರು.

ಅಕಿರ ಚಿತ್ರದ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಅಧಿತಿ ಕೈಯಲ್ಲಿ ಎರಡು ಚಿತ್ರಗಳಿವೆ. ಒಂದು ದಸರಾ ಗೊಂಬೆ ಮತ್ತು ಜಂಡಗಳು ಚಿತ್ರೀಕರಣ ನಡೆಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT