'೬-೫=೨' ಚಿತ್ರ ನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ 'ಕರ್ವ' 
ಸಿನಿಮಾ ಸುದ್ದಿ

'೬-೫=೨' ಚಿತ್ರ ನಿರ್ಮಾಪಕರಿಂದ ಮತ್ತೊಂದು ಹಾರರ್ ಚಿತ್ರ 'ಕರ್ವ'

ಕೃಷ್ಣ ಚೈತನ್ಯ ನಿರ್ಮಾಪಕರಾಗಿ ಕೆ ಎಸ್ ಅಶೋಕ ನಿರ್ದೇಶಿಸಿದ್ದ '೬-೫=೨' ಯಶಸ್ಸು ಕಂಡ ಚಿತ್ರ. ಈಗ ಇದೇ ನಿರ್ಮಾಪಕ ಮತ್ತೊಂದು ಹಾರರ್ ಚಿತ್ರಕ್ಕೆ ಅಣಿಯಾಗಿದ್ದಾರೆ.

ಬೆಂಗಳೂರು: ಕೃಷ್ಣ ಚೈತನ್ಯ ನಿರ್ಮಾಪಕರಾಗಿ ಕೆ ಎಸ್ ಅಶೋಕ ನಿರ್ದೇಶಿಸಿದ್ದ '೬-೫=೨' ಯಶಸ್ಸು ಕಂಡ ಚಿತ್ರ. ಈಗ ಇದೇ ನಿರ್ಮಾಪಕ ಮತ್ತೊಂದು ಹಾರರ್ ಚಿತ್ರಕ್ಕೆ ಅಣಿಯಾಗಿದ್ದಾರೆ.

ಈ ಬಾರಿ ನಿರ್ಮಾಪಕ 'ಕರ್ವ' ಸಿನೆಮಾದ ಜೊತೆಗೆ ತೊಡಗಿಸಿಕೊಂಡಿದ್ದಾರೆ. ಚೊಚ್ಚಲ ನಿರ್ದೇಶಕ ನವನೀತ್ ಬರೆದು ನಿರ್ದೇಶಿಸುತ್ತಿರುವ ಚಿತ್ರ ಇದು. "'ಕರ್ವ' ಹಾರರ್ ಸಿನೆಮಾ ಆದರೂ ಇದು ನೈಜ ಚಲನಚಿತ್ರ. ಸಿನೆಮಾ ಬಿಡುಗಡೆಯಾದ ಮೇಲೆ ಜನರಿಗೆ ಇದು ತಿಳಿಯುತ್ತದೆ" ಎನ್ನುತ್ತಾರೆ ಚೈತನ್ಯ.

'೬-೫=೨' ಸಿನೆಮಾದ ಜೊತೆಗೆ ಇದನ್ನು ಹೋಲಿಸಲು ಇಷ್ಟ ಪಡದ ನಿರ್ಮಾಪಕ ಕನ್ನಡ ಚಿತ್ರರಂಗದಲ್ಲಿ ಇದು ವಿನೂತನ ಪ್ರಯೋಗವಾಗಲಿದೆ ಎನ್ನುತ್ತಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, '೬-೫=೨' ನಂತರ ಮತ್ತೊಂದು ಹಾರರ್ ಚಿತ್ರ ನಿರ್ಮಿಸುವ ಇರಾದೆಯಿರಲಿಲ್ಲ ನನಗೆ. ಏಕೆಂದರೆ '೬-೫=೨' ನಂತರ ಸುಮಾರು ೧೫೦ ಹಾರರ್ ಚಿತ್ರಗಳು ಬಿಡುಗಡೆಯಾಗಿವೆ, ಆದರೆ 'ಕರ್ವ' ನನ್ನನ್ನು ಸೆಳೆದಿದ್ದರಿಂದ ಮುಂದುವರೆದೆ" ಎನ್ನುತ್ತಾರೆ.

ಶ್ರೀಲಂಕಾ, ಊಟಿ ಮತ್ತು ಮೈಸೂರಿನಲ್ಲಿ 'ಕರ್ವ'ದ ಚಿತ್ರೀಕರಣ ನಡೆದಿದ್ದು ದೇವರಾಜ್, ತಿಲಕ್ ಶೇಖರ್, ಆರ್ ಜೆ ರೋಹಿತ್, ಅನೀಶ್ ಆಂಬ್ರೋಸ್ ಮತ್ತು ಅಣು ಪೂವಮ್ಮ ತಾರಾಗಣದಲ್ಲಿದ್ದಾರೆ.

"ಈಗ ಮೊದಲ ಪ್ರತಿ ಪಡೆಯುವತ್ತ ಗಮನ ಹರಿಸಿದ್ದೇವೆ ಮತ್ತು ಇನ್ನೊಂದು ವಾರದಲ್ಲಿ ಸೆನ್ಸಾರ್ ಮಂಡಲಿಗೆ ಕಳುಹಿಸಲಿದ್ದೇವೆ" ಎನ್ನುವ ಚೈತನ್ಯ ಸಿನೆಮಾ ಚೆನ್ನಾಗಿ ಬಂದಿರುವುದಾಗಿ ಭರವಸೆ ವ್ಯಕ್ತಪಡಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

ಕೆ ಎಸ್ ಅಶೋಕ aವರೊಂದಿಗೆ ಚೈತನ್ಯ ಮತ್ತೊಂದು ಸಿನೆಮಾ ಕೂಡ ನಿರ್ಮಿಸಲಿದ್ದಾರಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT