ರಂಗಭೂಮಿ ನಟ ಮನೀಶ್ ರಿಷಿ 
ಸಿನಿಮಾ ಸುದ್ದಿ

ಸಿಂಪಲ್ ಸುನಿಯಿಂದ 'ಆಪರೇಶನ್ ಅಲಮೇಲಮ್ಮ'

'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ' ನಂತರ ನಿರ್ದೇಶಕ ಸುನಿ ಮುಂದಿನ ಯೋಜನೆಗೆ ಕೈಹಾಕಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಸಿನೆಮಾದ ಚಿತ್ರೀಕರಣ ಸದ್ದಿಲ್ಲದೇ

ಬೆಂಗಳೂರು: 'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ' ನಂತರ ನಿರ್ದೇಶಕ ಸುನಿ ಮುಂದಿನ ಯೋಜನೆಗೆ ಕೈಹಾಕಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಸಿನೆಮಾದ ಚಿತ್ರೀಕರಣ ಸದ್ದಿಲ್ಲದೇ ಸೋಮವಾರದಿಂದ ಪ್ರಾರಂಭವಾಗಿದೆ.

ಬಲ್ಲ ಮೂಲಗಳ ಪ್ರಕಾರ ಅವರೇ ಕಥೆ ಮತ್ತು ಸಂಭಾಷಣೆ ಬರೆದು ಥ್ರಿಲ್ಲರ್ ಚಿತ್ರವೊಂದಕ್ಕೆ ಕೈಹಾಕಿದ್ದಾರೆ ಸುನಿ. ಹಲವಾರು ಹೊಸಬರಿಗೆ ಅವಕಾಶ ನೀಡಿ ಉತ್ತೇಜಿಸಿರುವ ನಿರ್ದೇಶಕ ಈ ಸಿನೆಮಾದಲ್ಲೂ ಕೂಡ ರಂಗಭೂಮಿ ನಟ ಮನೀಶ್ ರಿಷಿ ಅವರಿಗೆ ಚೊಚ್ಚಲ ಬಾರಿಗೆ ಬೆಳ್ಳಿ ತೆರೆಯಲ್ಲಿ ನಟಿಸಲು ಅವಕಾಶ ನೀಡಿದ್ದಾರಂತೆ.

ಇನ್ನೂ ಬಿಡುಗಡೆಯಾಗಬೇಕಿರುವ 'ಯು-ಟರ್ನ್' ಚಲನಚಿತ್ರದ ನಾಯಕ ನಟಿ ಶ್ರದ್ಧಾ ಶ್ರೀನಾಥ್ 'ಆಪರೇಶನ್ ಅಲಮೇಲಮ್ಮ' ಸಿನೆಮಾಗೂ ನಾಯಕಿಯಾಗಿರುವುದು ವಿಶೇಷ. ಶ್ರದ್ಧಾ ಈಗಾಗಲೇ 'ಊರ್ವಿ' ಸಿನೆಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ.

ಸದ್ಯಕ್ಕೆ 'ಯು-ಟರ್ನ್' ನ್ಯೂಯಾರ್ಕ್ ಪ್ರದರ್ಶನಕ್ಕಾಗಿ ವಿದೇಶದಲ್ಲಿರುವ ಶ್ರದ್ಧಾ ಜೂನ್ ನಲ್ಲಿ ಚಿತ್ರತಂಡವನ್ನು ಸೇರಲಿದ್ದಾರಂತೆ.

ಥ್ರಿಲ್ಲರ್ ವಿಭಾಗದಲ್ಲಿ ಅಪಹರಣ ಕಥೆ ಹೊಂದಿರುವ ಈ ಸಿನೆಮಾ ಸುನಿ ಅವರ ಮೊದಲ ಪ್ರಯತ್ನವಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!