'ಚಕ್ರವರ್ತಿ'ಯಲ್ಲಿ ನಟ ದರ್ಶನ್ 
ಸಿನಿಮಾ ಸುದ್ದಿ

'ಚಕ್ರವರ್ತಿ'ಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿರುವ ತೂಗುದೀಪ ಸಹೋದರರು!

ಸಹೋದರರಾದ ದರ್ಶನ್ ತೂಗುದೀಪ್ ಮತ್ತು ದಿನಕರ್ ತೂಗುದೀಪ್ ಮೊದಲಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 'ಚಕ್ರವರ್ತಿ' ಸಿನೆಮಾದಲ್ಲಿ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡರೆ

ಬೆಂಗಳೂರು: ಸಹೋದರರಾದ ದರ್ಶನ್ ತೂಗುದೀಪ್ ಮತ್ತು ದಿನಕರ್ ತೂಗುದೀಪ್ ಮೊದಲಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 'ಚಕ್ರವರ್ತಿ' ಸಿನೆಮಾದಲ್ಲಿ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡರೆ ದಿನಕರ್ ಖಳನಾಯಕನಾಗಲಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ "ತಮ್ಮನ ಜೊತೆ ಕೆಲಸ ಮಾಡುವುದಕ್ಕೆ ಹೆಮ್ಮೆ ಎಂದಿದ್ದಾರೆ".

ನಿರ್ದೇಶಕ-ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ದಿನಕರ್ ಈ ಪಾತ್ರಕ್ಕಾಗಿ ಸಜಾಗುತ್ತಿದ್ದಾರಂತೆ. 'ಸಾರಥಿ' ಸಿನೆಮಾದ ನಿರ್ಮಾಪಕರಾದ ಕೆ ವಿ ಸತ್ಯಪ್ರಕಾಶ್ ಇದನ್ನು ನಿರ್ಮಿಸುತ್ತಿದ್ದು ಆದಿತ್ಯ ಮತ್ತು ಸೃಜನ್ ಲೋಕೇಶ್ ಕೂಡ ತಾರಾಗಣದ ಭಾಗವಾಗಿದ್ದಾರೆ.

ನಿರ್ದೇಶಕ್ ಚಿಂತನ್ ಹೇಳುವಂತೆ "ದಿನಕರ್ ಜೊತೆಗೆ ಮತ್ತಿಬ್ಬರು ವಿಲನ್ ಗಳು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಇನ್ನೂ ಅಂತಿಮಗೊಳಿಸಬೇಕಿದೆ. ಆದಿತ್ಯ ಮತ್ತು ಸೃಜನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ಮೇಲೆ ಹೆಚ್ಚಿನ ವಿವರಗಳು ತಿಳಿಯಲಿವೆ. ಅಂಜಲಿ ನಾಯಕನಟಿಯಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಉಳಿದ ನಟರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ" ಎನ್ನುತ್ತಾರೆ.

ಈ ಹಿಂದೆ ದರ್ಶನ್ ಮತ್ತು ಆದಿತ್ಯ 'ಸ್ನೇಹಾನ ಪ್ರೀತೀನಾ' ಸಿನೆಮಾದಲ್ಲಿ ಒಟ್ಟಿಗೆ ನಟಿಸಿದ್ದರೆ, ಸೃಜನ್ ಜೊತೆಗೆ ದರ್ಶನ್ 'ನವಗ್ರಹ' ಮಾತು 'ಜಗ್ಗು ದಾದ' ಸಿನೆಮಾಗಳಲಿ ನಟಿಸಿದ್ದಾರೆ. ಆದಿತ್ಯ ಮತ್ತು ಸೃಜನ್ ಎದೆಗಾರಿಕೆಯಲ್ಲಿ ಒಟ್ಟಿಗೆ ನಟಿಸಿದ್ದರು.

ಮೇ ೨೪ ರಿಂದ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel