ರಮೇಶ್ ಅರವಿಂದ್ ಮತ್ತು ಬಾಲನಟಿ ಯುವಿನಾ ಪಾರ್ಥವಿ 
ಸಿನಿಮಾ ಸುದ್ದಿ

'ಪುಷ್ಪಕ ವಿಮಾನ' ಚಿತ್ರತಂಡದ ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತು

ನಟ ರಮೇಶ್ ಅರವಿಂದ್ ಅವರ ೧೦೦ ನೆ ಕನ್ನಡ ಚಿತ್ರ 'ಪುಷ್ಪಕ ವಿಮಾನ'ದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. "ನಾನು ಈ ಸಿನೆಮಾವನ್ನು ಸಂಪೂರ್ಣವಾಗಿ ಆಹ್ವಾದಿಸಿದ್ದೇನೆ

ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ೧೦೦ ನೆ ಕನ್ನಡ ಚಿತ್ರ 'ಪುಷ್ಪಕ ವಿಮಾನ'ದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. "ನಾನು ಈ ಸಿನೆಮಾವನ್ನು ಸಂಪೂರ್ಣವಾಗಿ ಆಹ್ವಾದಿಸಿದ್ದೇನೆ ಏಕೆಂದರೆ ತಿಳಿಹೃದಯದ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದೇನೆ" ಎನ್ನುತ್ತಾರೆ ನಟ.

"ನನ್ನ ಪಾತ್ರಕ್ಕೆ ಸಂಬಂಧಿಸಿದಂತೆ ಅಷ್ಟೇ ತೀವ್ರತೆಯಿಂದ ನಟಿಸಿರುವವಳು ಚೋಟು (ಬಾಲನಟಿ ಯುವಿನಾ ಪಾರ್ಥವಿ)" ಎನ್ನುತ್ತಾರೆ ರಮೇಶ್.

ಸಿನೆಮಾದ ಬಹುತೇಕ ದೃಶ್ಯಗಳು ಅಪ್ಪ ಮತ್ತು ಮಗಳ ನಡುವೆ ನಡೆಯುತ್ತವಂತೆ. "ಇವೆರಡೂ ಪಾತ್ರಗಳ ನಡುವಿನ ಸಂಬಂಧ, ಕಥೆ ಮತ್ತು ಹಾಡುಗಳು ಪ್ರೇಕ್ಷನಿಗೆ ಕಣ್ಣೀರು ತರಿಸಲಿದೆ. ಹೆಣ್ಣು ಮಗು ಇರುವವರಿಗೆ ಅಥವಾ ಹೆಣ್ಣುಮಗುವಾಗಿ ಹುಟ್ಟಿರುವವರಿಗೆ ಈ ಸಿನೆಮಾ ಕಾಡುತ್ತದೆ" ಎಂದು ಕೂಡ ತಿಳಿಸುತ್ತಾರೆ ರಮೇಶ್.

ಸಿನೆಮಾದಲ್ಲಿ ಕೆಲಸ ಮಾಡಿದ ಯುವ ನಟರು ಮತ್ತು ತಂತ್ರಜ್ಞರನ್ನು ಮನಸಾರೆ ಪ್ರಶಂಸಿಸುವ ರಮೇಶ್ "ಸಹ ನಿರ್ಮಾಪಕ ವಿಖ್ಯಾತ್ ಮತ್ತು ನಿರ್ದೇಶಕ ಎಸ್ ರವೀಂದ್ರನಾಥ್ ಮುನ್ನಡೆಸಿದ 'ಪುಷ್ಪಕ ವಿಮಾನ' ಸಿನೆಮಾದ ತಂಡ ಬಹಳ ಉತ್ಸಾಹಿ ಗುಂಪು. ನನ್ನ ೧೦೦ನೇ ಸಿನೆಮಾ ಅವರ ಮೊದಲ ಪ್ರಯತ್ನ. ಈ ಹೊಂದಾಣಿಕೆ ಬಹಳ ಆಪ್ತವಾಗಿ ಕೆಲಸ ಮಾಡಿದೆ. ಸಿನೆಮಾದ ಪ್ರತಿ ಫ್ರೇಮಿಗೂ ಹೊಸತೊಂದನ್ನು ಸೇರಿಸಿದೆ ತಂಡ" ಎನ್ನುತ್ತಾರೆ.

ರಚಿತಾ ರಾಮ್ ಮತ್ತು ಜೂಹಿ ಚಾವ್ಲಾ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೇಕ್ ಮೇಲೆ ಚೆರ್ರಿ ಹಣ್ಣಿದ್ದಂತೆ ಎನ್ನುವ ರಮೇಶ್ "ಇಡೀ ಸಿನೆಮಾ ಹೇಗೆ ಮೂಡಿ ಬಂದಿದೆ ಎಂಬುದನ್ನು ತಿಳಿಯಲು ಕಾತರದಿಂದಿದ್ದೇನೆ" ಎನ್ನುತ್ತಾರೆ.

ಈ ಸಿನೆಮಾದ ಡಬ್ಬಿಂಗ್ ನಂತರ ತಾವು ನಿರ್ದೇಶಿಸಲಿರುವ 'ಗಂಡು ಎಂದರೆ ಗಂಡು' ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ ರಮೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT