ಸಿನಿಮಾ ಸುದ್ದಿ

ಈಜು ಬರುವುದಿಲ್ಲ ಎಂದ ಮೇಲೆ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಬಾರದಿತ್ತು: ಅಂಬರೀಶ್

Vishwanath S

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ಇಬ್ಬರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ಹಿನ್ನೆಲೆ ನಟ ಮತ್ತು ಮಾಜಿ ಸಚಿವ ಅಂಬರೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್, ಈಗಿರುವ ಟೆಕ್ನಾಲಜಿಯಲ್ಲಿ ಇಂಥದ್ದೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.

ನಿನ್ನೆಯಿಂದ ಈ ಘಟನೆಗಳನ್ನೆಲ್ಲಾ ಟಿವಿಯಲ್ಲಿ ನೋಡುತ್ತಲೇ ಇದ್ದೇನೆ. ಈ ಘಟನೆಗಳಿಂದಾಗಿ ಎದೆ ಜಿಲ್ ಎಂದಿತ್ತು ಎಂದರು. ಇನ್ನು ಚಿತ್ರೀಕರಣ ವೇಳೆ ಅವರಿಬ್ಬರೂ ತಮಗೆ ಈಜು ಬರುವುದಿಲ್ಲ ಎಂದು ಮೇಲೆ ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದರು.

ಈಗ ಎಲ್ಲಾ ಮುಗಿದುಹೋಗಿದೆ. ಬೇರೆ ಘಟನೆಗಳಲ್ಲಾದರೆ ಏನಾದರೂ ಮಾಡಬಹುದಿತ್ತೇನೋ. ಆದರೆ, ನೋಡು ನೋಡುತ್ತಿದ್ದಂತೆಯೇ ಎಲ್ಲವೂ ಮುಗಿದು ಹೋಗಿದೆ. ಹಾಗಾಗಿ ಅವರಿಬ್ಬರ ಕುಟುಂಬದವರಿಗೆ ಸಮಾಧಾನ ಹೇಳದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ. 

SCROLL FOR NEXT