'ನಟರಾಜ ಸರ್ವಿಸ್' ಸಿನೆಮಾದಲ್ಲಿ ಮಯೂರಿ ಮತ್ತು ಶರಣ್ 
ಸಿನಿಮಾ ಸುದ್ದಿ

೫೦೦-೧೦೦೦ ನೋಟಿನ ವಿಷಯ ಮರೆತು 'ನಟರಾಜ ಸರ್ವಿಸ್' ನೋಡಿ: ಪವನ್ ಒಡೆಯರ್

೨೦೧೧ ರಲ್ಲಿ 'ಗೋವಿಂದಾಯ ನಮಃ' ಸಿನೆಮಾದ ಮೂಲಕ ಕನ್ನಡ ಚಿತ್ರರಸಿಕರ ಗಮನ ಸೆಳೆದ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನೂತನ ಚಿತ್ರ 'ನಟರಾಜ ಸರ್ವಿಸ್' ಹಲವು ದಿನಗಳಿಂದ ಬಿಡುಗಡೆಗಾಗಿ

ಬೆಂಗಳೂರು: ೨೦೧೧ ರಲ್ಲಿ 'ಗೋವಿಂದಾಯ ನಮಃ' ಸಿನೆಮಾದ ಮೂಲಕ ಕನ್ನಡ ಚಿತ್ರರಸಿಕರ ಗಮನ ಸೆಳೆದ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನೂತನ ಚಿತ್ರ 'ನಟರಾಜ ಸರ್ವಿಸ್' ಹಲವು ದಿನಗಳಿಂದ ಬಿಡುಗಡೆಗಾಗಿ ಕಾಯುತ್ತಿದ್ದು, ಈ ಶುಕ್ರವಾರ ತೆರೆ ಕಾಣುವ ಸಾಧ್ಯತೆ ಇದೆ. 
ಶರಣ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾವನ್ನು ಪುನೀತ್ ರಾಜಕುಮಾರ್ ಅರ್ಪಿಸುತ್ತದ್ದಾರೆ. "ಈ ಸಿನೆಮಾದಲ್ಲಿ ಶರಣ್ ವಿಭಿನ್ನವಾಗಿ ನಟಿಸಿದ್ದಾರೆ" ಎನ್ನುತ್ತಾರೆ ಐದು ಸಿನೆಮಾಗಳ ನಿರ್ದೇಶಕ ಪವನ್.
"ಶರಣ್ ಮತ್ತು ಮಯೂರಿ ತಮ್ಮ ಶೈಲಿಯ ನಟನೆಯಿಂದ ಅವರು ಅಭಿನಯಿಸಿರುವ ಪಾತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವುದಲ್ಲದೆ, ಈ ರಸ್ತೆ ಪ್ರವಾಸದಲ್ಲಿ ಎಲ್ಲ ಮನರಂಜನಾ ಅಂಶಗಳು ಇರಲಿವೆ" ಎನ್ನುತ್ತಾರೆ ನಿರ್ದೇಶಕ. 
ಪುನೀತ್ ರಾಜ್ ಕುಮಾರ್ ಅವರ ಆಪ್ತ ಎನ್ ಎಸ್ ರಾಜಕುಮಾರ್ ಈ ಸಿನೆಮಾದ ನಿರ್ಮಾಪಕ. ಈ ಹಿಂದೆ ಪುನೀತ್ ರಾಜಕುಮಾರ್ ಅವರ 'ರಣ ವಿಕ್ರಮ' ಸಿನೆಮಾವನ್ನು ಕೂಡ ಪವನ್ ಒಡೆಯರ್ ನಿರ್ದೇಶಿಸಿದ್ದರು. 
"ಈಗ ಸದ್ಯಕ್ಕೆ ೫೦೦ ಮತ್ತು ೧೦೦0 ರೂ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಷಯ ಮರೆತು ೧೦೦ ರೂ ಹಿಡಿದು ಬಂದು ನಟರಾಜ ಸರ್ವಿಸ್ ನೋಡಿ" ಎನ್ನುತ್ತಾರೆ ನಿರ್ದೇಶಕ ಪವನ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT