ನಟ ಶರಣ್ 
ಸಿನಿಮಾ ಸುದ್ದಿ

'ನಟರಾಜ ಸರ್ವಿಸ್': ೫೦೦ ಮತ್ತು ೧೦೦೦ ರೂ ನೋಟುಗಳ ಬಗ್ಗೆ ಯು ಟರ್ನ್!

ನಟ ಶರಣ್ ತಮ್ಮ ಮುಂದಿನ ಚಿತ್ರ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ನಿರ್ಧಾರದಿಂದ ರಾಜ್ಯದ ಜನತೆಯೆಲ್ಲಾ ಎಟಿಎಂ ಮತ್ತು

ಬೆಂಗಳೂರು: ನಟ ಶರಣ್ ತಮ್ಮ ಮುಂದಿನ ಚಿತ್ರ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ನಿರ್ಧಾರದಿಂದ ರಾಜ್ಯದ ಜನತೆಯೆಲ್ಲಾ ಎಟಿಎಂ ಮತ್ತು ಬ್ಯಾಂಕ್ ಗಳ ಕಡೆದು ನಡೆದು ಹೋಗುತ್ತಿದ್ದರೆ, ಇತ್ತ ಸಿನೆಮಾಗಳ ಕಡೆಗೆ ನಡೆದು ಬರಿರುತ್ತಿರುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದು ಗಾಂಧಿನಗರದ ಅಳಲು. 
ಈಮಧ್ಯೆ 'ನಟರಾಜ ಸರ್ವಿಸ್' ಸಿನೆಮಾ ನೋಡಲು ಬರುವ ಜನರಿಂದ ನಾವು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಸ್ವೀಕರಿಸಲಿದ್ದೇವೆ ಎಂದು ಘೋಷಿಸಿದ್ದ ತಂಡ ಈಗ ಯು-ಟರ್ನ್ ಹೊಡೆದಿದೆ. "ಜನರ ಗಮನವನ್ನು ಸೆಳೆಯಲು ನಮ್ಮ ವಿತರಕರು ಹಾಗೆ ಹೇಳಿದ್ದರು, ಆದರೆ ತಾಂತ್ರಿಕವಾಗಿ ಅದು ಸಾಧ್ಯವಿಲ್ಲ" ಎಂದಿದ್ದಾರೆ ನಟ ಶರಣ್. 
ಚಲನಚಿತ್ರದಲ್ಲಿ ನಟರಾಜನ ಪಾತ್ರ ನಿರ್ವಹಿಸಿರುವ ಶರಣ್ "ನಟರಾಜ ಭೂಮಿಯ ಮೇಲೆ ಅತಿ ಸಂತಸದ ವ್ಯಕ್ತಿ ಮತ್ತು ಜನ ಇವೊತ್ತು ಬದುಕಲು ಇಶ್ಟ ಪಡುವುದು ಹಾಗೆಯೇ" ಎನ್ನುತ್ತಾರೆ. 
ಎನ್ ಎಸ್ ರಾಜಕುಮಾರ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಈ ಸಿನೆಮಾದಲ್ಲಿ ಮಯೂರಿ ನಾಯಕ ನಟಿ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಅರುಳ್ ಕೆ ಸೋಮಸುಂದರಂ ಅವರ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT