ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್ 
ಸಿನಿಮಾ ಸುದ್ದಿ

'ಲೀ' ಮೂಲಕ ಕನ್ನಡ ಚಿತ್ರರಂಗಕ್ಕೆ ಆನಂದ್ ರಾಜ ವಿಕ್ರಂ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ

ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಂ 'ಲೀ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಎಚ್ ಎಂ ಶ್ರೀನಂದನ್ ನಿರ್ದೇಶಿಸುತ್ತಿರುವ ಈ

ಬೆಂಗಳೂರು: ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಂ 'ಲೀ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಎಚ್ ಎಂ ಶ್ರೀನಂದನ್ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಸುಮಂತ್ ಶೈಲೇಂದ್ರ ಮತ್ತು ನಭಾ ನಟೇಶ್ ಮುಖ್ಯ ನಟರು. 
ಎಂಜಿನಿಯರಿಂಗ್ ಪದವಿ ಮುಗಿಸಿರುವ ೨೭ ವರ್ಷದ ತಂತ್ರಜ್ಞ ಆನಂದ್ ಹೇಳುವಂತೆ "ನಾನು ಸೌಂಡ್ ಎಂಜಿನಿಯರಿಂಗ್ ಓದುವುದಾಗಿ ನಮ್ಮ ಪೋಷಕರಿಗೆ ಹೇಳಿದ್ದೆ ಆದರೆ ಅದು ಡಿಪ್ಲೊಮೊ ಪದವಿ ಆಗಿತ್ತು ಆದುದರಿಂದ ನಾನು ಸಿವಿಲಿ ಎಂಜಿನಿಯರಿಂಗ್ ಮುಗಿಸಿದೆ" ಎನ್ನುತ್ತಾರೆ. 
ಕಾಲೇಜಿನಲ್ಲಿ 'ಫ್ಲೀ' ಎಂಬ ಸಂಗೀತ ಬ್ಯಾಂಡ್ ನ ಸದಸ್ಯ ಆನಂದ್. 'ಅಗ್ರಜ' ಸಿನೆಮಾದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ಶ್ರೀನಂದನ್ ತಮ್ಮ ಕಾಲೇಜು ಗೆಳೆಯನ ಶಿಫಾರಸ್ಸಿನ ಮೇರೆಗೆ ಆನಂದ್ ಅವರನ್ನು ಎರಡನೇ ಸಿನೆಮಾಗೆ ಆಯ್ಕೆ ಮಾಡಿದ್ದಾರೆ. 
'ಲೀ' ಸಿನೆಮಾದ ಸಂಗೀತ ಮಾರ್ಷಿಯಲ್ ಕಲೆಯ ಸುತ್ತ ಸುತ್ತುತ್ತದೆ ಎಂದು ವಿವರಿಸುವ ಆನಂದ್ "'ಲೀ' ಎಂಬುದು ಬ್ಯಾಂಡ್ ಹೆಸರು ಮತ್ತು ಬ್ರೂಸ್ ಲೀ ಹಾಗು ಜೆಟ್ ಲೀ ಅವರಿಗೆ ಸಂಬಂಧಿಸಿದ್ದು. ಈ ಸಿನೆಮಾದ ಪ್ರಮುಖ ನಟನ ಪಾತ್ರದ ಹೆಸರು ಕೂಡ ಲೀ. ನಿರ್ದೇಶಕ ನನಗೆ ಕಥೆ ಹೇಳಿದಾಗ ಲೀ ಹೆಸರಿನಲ್ಲಿ ಪವರ್ ಇದೆ ಎಂದೆನಿಸಿತು. 
ನಿರ್ದೇಶಕರ ಈ ಐಡಿಯಾವನ್ನೇ ಅನುಸರಿಸಿ, ನಾನು ಪವರ್ ಇರುವ ಸಂಗೀತ ನೀಡಿದ್ದೇನೆ. ಜೊತೆಗೆ ರೊಮ್ಯಾಂಟಿಕ್ ಮೆಲೋಡಿ ಕೂಡ ಇರಲಿದೆ" ಎನ್ನುತ್ತಾರೆ. 
ಎ ಆರ್ ರೆಹಮಾನ್ ತಮ್ಮ ಸಂಗೀತಕ್ಕೆ ಸ್ಫೂರ್ತಿ ಎನ್ನುತ್ತಾರೆ ಆನಂದ್. 'ಲೀ' ಸಿನೆಮಾದ ಹಿನ್ನಲೆ ಸಂಗೀತವನ್ನು ಗುರುಕಿರಣ್ ಒದಗಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT