ಬಾಲಿವುಡ್ ನಟಿ ವಿದ್ಯಾ ಬಾಲನ್ 
ಸಿನಿಮಾ ಸುದ್ದಿ

ಚಿತ್ರರಂಗದ ಜೀವನದಲ್ಲಿ ನಾನು ಎಂದಿಗೂ ಸ್ಫರ್ಧೆಗೆ ಬಿದ್ದವಳಲ್ಲ: ವಿದ್ಯಾ ಬಾಲನ್

ಚಿತ್ರರಂಗದ ಜೀವನದಲ್ಲಿ ನಾನು ಎಂದಿಗೂ ಸ್ಪರ್ಧೆಗೆ ಬಿದ್ದವಳಲ್ಲ, ನಾನೇ ಗೆಲ್ಲಬೇಕೆಂಬ ಇಚ್ಛೆಯೂ ನನಗಿರಲಿಲ್ಲ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಹೇಳಿದ್ದಾರೆ...

ನವದೆಹಲಿ: ಚಿತ್ರರಂಗದ ಜೀವನದಲ್ಲಿ ನಾನು ಎಂದಿಗೂ ಸ್ಪರ್ಧೆಗೆ ಬಿದ್ದವಳಲ್ಲ, ನಾನೇ ಗೆಲ್ಲಬೇಕೆಂಬ ಇಚ್ಛೆಯೂ ನನಗಿರಲಿಲ್ಲ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಹೇಳಿದ್ದಾರೆ.

ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿದ್ಯಾ ಬಾಲನ್ ಅವರು ತಮ್ಮ ಚಿತ್ರರಂಗದ ಜೀವನದ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಎಂದಿಗೂ ಸ್ಪರ್ಧೆಗೆ ಬಿದ್ದಿರಲಿಲ್ಲ. ನಾನೇ ಗೆಲ್ಲಬೇಕು ಹಾಗೂ ಸ್ಟಾರ್ ಪಟ್ಟ ಬೇಕೆಂಬ ಜಿದ್ದಿಗೂ ನಿಂತಿರಲಿಲ್ಲ. ಸಿನಿಮಾ ಗೆಲ್ಲಬೇಕೆಂಬ ಒಂದೇ ಆಸೆಯಿಂದ ಕೆಲಸದಲ್ಲಿ ತೊಡಗಿಕೊಂಡವಳು ನಾನು ಎಂದು ಹೇಳಿದ್ದಾರೆ.

ಇತರರು ಮಾಡಿರುವ ಚಿತ್ರಗಳನ್ನು ನೋಡುತ್ತಿರುತ್ತೇನೆ. ಇಷ್ಟವಾಗಿದರೆ ಅವರನ್ನು ಪ್ರಶಂಸಿಸುತ್ತೇನೆ. ಆದರೆ, ಎಂದಿಗೂ ಅವರ ರೀತಿ ಆಗಬೇಕೆಂಬ ಜಿದ್ದಿಗೆ ಬಿದ್ದಿರಲಿಲ್ಲ. ಸ್ಪರ್ಧಾತ್ಮಕ ಗುಣವನ್ನು ಹೊಂದಿದವಳು ನಾನಲ್ಲ. ನನ್ನ ಚಿತ್ರವನ್ನು ನಾನು ಮತ್ತೊಂದು ಚಿತ್ರಕ್ಕೆ ಎಂದಿಗೂ ಹೋಲಿಕೆ ಮಾಡಿ ನೋಡುವುದಿಲ್ಲ. ನನಗೆ ಹೇಗೆ ಇರಬೇಕು ಅನಿಸುತ್ತದೆಯೋ ಹಾಗೆ ಇರುತ್ತೇನೆ. ನನಗೆ ನನ್ನ ಮೇಲೆ ಆತ್ಮವಿಶ್ವಾಸವಿದ್ದು, ನನ್ನ ಸಹೋದರಿ ಹಾಗೂ ನನಗೆ ನನ್ನ ಪೋಷಕರು ಸ್ವತಂತ್ರ ಹಾಗೂ ಆತ್ಮವಿಶ್ವಾಸವೆಂಬ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.

ಸಿನಿಮಾ ಗೆಲ್ಲಲಿ ಅಥವಾ ಸೋಲಲಿ ಅದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ಈ ಸಿನಿಮಾ ಅಲ್ಲದಿದ್ದರೆ, ಮತ್ತೊಂದು ಸಿನಿಮಾ ಮಾಡಿದರೆ ಆಯಿತು. ಇನ್ನೊಂದು ಸಿನಿಮಾ ಗೆಲ್ಲುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಂಡಿರುತ್ತೇನೆ. ನಾನು ಮಾಡಿದ ಕೆಲಸದಿಂದ ಸಮಾಧಾನ ಸಿಗಬೇಕೆಂದು ಬಯಸುತ್ತೇನೆ.

ನನಗೆ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಹೆಸರು ಮಾಡಬೇಕು, ಜನರಿಗೆ ಚಿತ್ರ ಇಷ್ಟವಾಗಬೇಕೆಂಬುದಷ್ಟೇ ನನ್ನ ಗುರಿಯಾಗಿದ್ದು, ಅದನ್ನು ಹೊರತು ಪಡಿಸಿ ಸ್ಪರ್ಧೆಗೆ ನಿಲ್ಲುವ, ಸ್ಟಾರ್ ಗಿರಿ ದಕ್ಕಿಸಿಕೊಳ್ಳಬೇಕೆಂದು ಚಿತ್ರರಂಗಕ್ಕೆ ಬಂದವಳಲ್ಲ. ಪ್ರತೀಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಸೋಲು-ಗೆಲವು ಇದ್ದೇ ಇರುತ್ತದೆ. ಅದು ಜೀವನದ ಒಂದು ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಒಂದಾದ ಮೇಲೊಂದರಂತೆ ಸಾಕಷ್ಟು ಯಶಸ್ಸು ಚಿತ್ರಗಳಲ್ಲಿ ನಡೆಸಿರುವ ವಿದ್ಯಾಬಾಲನ್ ಅವರು ಇದೀಗ ತಮ್ಮ ಬಹು ನಿರೀಕ್ಷಿತ ಚಿತ್ರ ಕಹಾನಿ-2 ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

News headlines 28-08-2025 | ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ- DK Shivakumar; ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ಏನು..?; ಬೀದರ್‌: ಭಾರಿ ಮಳೆ, ಹಲವು ಸೇತುವೆ ಬಂದ್; ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮತ್ತೆ ED ಕಸ್ಟಡಿಗೆ

SCROLL FOR NEXT