ನಟ ಓಂಪುರಿ 
ಸಿನಿಮಾ ಸುದ್ದಿ

ಪಾಕಿಸ್ತಾನಿ ಕಲಾವಿದರು ವೀಸಾ ಜೊತೆಗೆ ಬಂದಿದ್ದಾರೆ, ಕಾನೂನು ಉಲ್ಲಂಘಿಸಿಲ್ಲ: ಓಂಪುರಿ

ಕಲೆ ಮತ್ತು ರಾಜಕೀಯವನ್ನು ಬೇರ್ಪಡಿಸಿ ಇಡಬೇಕು ಮತ್ತು ಕಲಾವಿದರನ್ನು ನಿಷೇಧಿಸುವುದರಿಂದ ಪರಿಹಾರ ಸಿಗುವುದಿಲ್ಲ ಎಂದಿರುವ ಖ್ಯಾತ ನಟ ಓಂಪುರಿ ಮತ್ತು ನಿರ್ದೇಶಕ ನಾಗೇಶ್ ಕುಕೊನೂರ್,

ಮುಂಬೈ: ಕಲೆ ಮತ್ತು ರಾಜಕೀಯವನ್ನು ಬೇರ್ಪಡಿಸಿ ಇಡಬೇಕು ಮತ್ತು ಕಲಾವಿದರನ್ನು ನಿಷೇಧಿಸುವುದರಿಂದ ಪರಿಹಾರ ಸಿಗುವುದಿಲ್ಲ ಎಂದಿರುವ ಖ್ಯಾತ ನಟ ಓಂಪುರಿ ಮತ್ತು ನಿರ್ದೇಶಕ ನಾಗೇಶ್ ಕುಕೊನೂರ್, ಪಾಕಿಸ್ತಾನಿ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ. 
ಪಾಕಿಸ್ತಾನಿ ಕಲಾವಿದರು ಕಾನೂನುಬದ್ಧವಾಗಿ ಇಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ವಾಪಸ್ ಕಳುಹಿಸಿದರೆ ಅವರನ್ನು ತಮ್ಮ ಸಿನೆಮಾಗಳಿಗಾಗಿ ಕರೆತಂದಿರುವ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಲಿದೆ ಎಂದು ಕೂಡ ಓಂಪುರಿ ಹೇಳಿದ್ದಾರೆ. 
"ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವಾಗ, ನಾವೆಲ್ಲಾ ಸುಮ್ಮನೆ ಕೂರಬೇಕು. ಇಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಲಾವಿದರನ್ನು ವಾಪಸ್ ಕಳುಹಿಸಿದರೆ ಅಥವಾ ಇಲ್ಲೇ ಉಳಿಯಲು ಬಿಟ್ಟರೆ, ಏನು ಬದಲಾಗುವುದಿಲ್ಲ. ನಾನು ಪಾಕಿಸ್ತಾನಕ್ಕೆ ಆರು ಬಾರಿ ಹೋಗಿದ್ದೇನೆ ಮತ್ತು ಅಲ್ಲಿ ಎಲ್ಲ ರೀತಿಯ ಜನಗಳನ್ನು ಭೇಟಿ ಮಾಡಿದ್ದೇನೆ" ಎಂದು 65 ವರ್ಷದ ನಟ ಹೇಳಿದ್ದಾರೆ. 
"ನನ್ನನ್ನು ಅಲ್ಲಿ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಈಗ ಪಾಕಿಸ್ತಾನಿ ಕಲಾವಿದರು ತಾವು ತೊಡಗಿಸಿಕೊಂಡಿರುವ ಸಿನೆಮಾಗಳನ್ನು ತೊರೆದರೆ, ಭಾರತದ ಜನಕ್ಕೂ ಹೆಚ್ಚು ಆರ್ಥಿಕ ನಷ್ಟವಾಗಲಿದೆ. ಆ ನಟರು ಇಲ್ಲಿಗೆ ಕಾನೂನುಬಾಹಿರವಾಗಿ ಬಂದಿಲ್ಲ. ಅವರ ಬಳಿ ಕಾನೂನುಬದ್ಧವಾದ ವೀಸಾ ಇದೆ. ಸರ್ಕಾರವೇ ಅವರಿಗೆ ವಾಪಸ್ ಹೋಗುವಂತೆ ಹೇಳಿದರೆ ಆ ಮಾತು ಬೇರೆ" ಎಂದು ಓಂಪುರಿ ಹೇಳಿದ್ದಾರೆ. 
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಸಂಕೀರ್ಣವಾಗಿದ್ದು ಕಲೆಯನ್ನು ರಾಜಕೀಯದಿಂದ ಹೊರಗಿಡಬೇಕು ಎಂದು ನಿರ್ದೇಶಕ ನಾಗೇಶ್ ಕುಕೊನೂರ್ ಹೇಳಿದ್ದಾರೆ. 
ಇನ್ನು ಹಲವಾರು ಭಾರತೀಯ ಕಲಾವಿದರು, ನಿರ್ದೇಶಕರು ಪಾಕಿಸ್ತಾನಿ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ ನಟ ರಣದೀಪ್ ಹೂಡ, ಅನುಪಮ್ ಖೇರ್, ನಿರ್ದೇಶಕ ಅಶೋಕ್ ಪಂಡಿತ್ ನಿಷೇಧಕ್ಕೆ ಬೆಂಬಲ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT