ನಟ ದರ್ಶನ್ 
ಸಿನಿಮಾ ಸುದ್ದಿ

'ಚಕ್ರವರ್ತಿ'ಯ ಕ್ರ್ಯೂಸ್ ಕಥೆಗಳು!

ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ

ಬೆಂಗಳೂರು: ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ ಚಿತ್ರೀಕರಣಗೊಂಡಿರುವುದು ಇದಕ್ಕೆ ಕಾರಣ. 
20 ದಿನಗಳ ಚಿತ್ರೀಕರಣದ ನಂತರ ಚಿತ್ರತಂಡ ನಗರಕ್ಕೆ ಹಿಂದಿರುಗಿದೆ. ಹಡಗು ಸಿಂಗಾಪುರಿನಿಂದ ಮಲೇಷಿಯಾ ಮತ್ತು ಹಿಂದಕ್ಕೆ ಪ್ರಯಾಣ ಮಾಡುವಾಗ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಿರುವುದಾಗಿ ಚಿಂತನ್ ತಿಳಿಸುತ್ತಾರೆ. "ಹಡಗಿನಲ್ಲಿ ಚಿತ್ರೀಕರಣ ವಿಭಿನ್ನವಾಗಿತ್ತು. ಹಡಗು ಸಮುದ್ರ ಮಧ್ಯೆ ಚಲಿಸುತ್ತಿರುವಾಗ ನಾವು ಚಿತ್ರೀಕರಣ ಮಾಡಿದೆವು" ಎಂದು ಅವರು ತಿಳಿಸುತ್ತಾರೆ. 
ನಾವು ಯಾವುದೋ ಪುಟ್ಟ ನಗರದಲ್ಲಿ ಇದ್ದಂತೆ ಭಾಸವಾಯಿತು. ಕೆಸಿನೋ ಒಂದನ್ನು ಹೊರತುಪಡಿಸಿ ಹಡಗಿನ ಎಲ್ಲ ಭಾಗದಲ್ಲೂ ಚಿತ್ರೀಕರಣ ನಡೆಸಿದೆವು. ಕೆಸಿನೋ ಒಳಗೆ ಕ್ಯಾಮರಾ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ ಎನ್ನುತ್ತಾರೆ ಚಿಂತನ್. 
ಈಗಾಗಲೇ ಶೇಕಡಾ 75 ರಷ್ಟು ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲಿ ಉಳಿದ ಚಿತ್ರೀಕರಣ ಮುಗಿಸಿ, ಪರಿಚಯಾತ್ಮಕ ಹಾಡಿಗಾಗಿ ಅಕ್ಟೋಬರ್ 25 ರಂದು ಬ್ಯಾಂಕಾಕ್ ಗೆ ತೆರಳುತ್ತಿರುವುದಾಗಿ ತಿಳಿಸುತ್ತಾರೆ ಚಿಂತನ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT