ನಟ ದರ್ಶನ್ 
ಸಿನಿಮಾ ಸುದ್ದಿ

'ಚಕ್ರವರ್ತಿ'ಯ ಕ್ರ್ಯೂಸ್ ಕಥೆಗಳು!

ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ

ಬೆಂಗಳೂರು: ಚಿಂತನ್ ಚೊಚ್ಚಲ ನಿರ್ದೇಶನದ 'ಚಕ್ರವರ್ತಿ' ದಿನದಿಂದ ದಿನಕ್ಕೆ ನಟ ದರ್ಶನ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸುತ್ತಿದೆ. ಸಮುದ್ರದಲ್ಲಿ ಚಲಿಸುತ್ತಿದ್ದ 12 ಅಂತಸ್ತಿನ ಹಡಗಿನಲ್ಲಿ ಸಿನೆಮಾದ ಪ್ರಮುಖ ಭಾಗದ ಚಿತ್ರೀಕರಣಗೊಂಡಿರುವುದು ಇದಕ್ಕೆ ಕಾರಣ. 
20 ದಿನಗಳ ಚಿತ್ರೀಕರಣದ ನಂತರ ಚಿತ್ರತಂಡ ನಗರಕ್ಕೆ ಹಿಂದಿರುಗಿದೆ. ಹಡಗು ಸಿಂಗಾಪುರಿನಿಂದ ಮಲೇಷಿಯಾ ಮತ್ತು ಹಿಂದಕ್ಕೆ ಪ್ರಯಾಣ ಮಾಡುವಾಗ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಿರುವುದಾಗಿ ಚಿಂತನ್ ತಿಳಿಸುತ್ತಾರೆ. "ಹಡಗಿನಲ್ಲಿ ಚಿತ್ರೀಕರಣ ವಿಭಿನ್ನವಾಗಿತ್ತು. ಹಡಗು ಸಮುದ್ರ ಮಧ್ಯೆ ಚಲಿಸುತ್ತಿರುವಾಗ ನಾವು ಚಿತ್ರೀಕರಣ ಮಾಡಿದೆವು" ಎಂದು ಅವರು ತಿಳಿಸುತ್ತಾರೆ. 
ನಾವು ಯಾವುದೋ ಪುಟ್ಟ ನಗರದಲ್ಲಿ ಇದ್ದಂತೆ ಭಾಸವಾಯಿತು. ಕೆಸಿನೋ ಒಂದನ್ನು ಹೊರತುಪಡಿಸಿ ಹಡಗಿನ ಎಲ್ಲ ಭಾಗದಲ್ಲೂ ಚಿತ್ರೀಕರಣ ನಡೆಸಿದೆವು. ಕೆಸಿನೋ ಒಳಗೆ ಕ್ಯಾಮರಾ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ ಎನ್ನುತ್ತಾರೆ ಚಿಂತನ್. 
ಈಗಾಗಲೇ ಶೇಕಡಾ 75 ರಷ್ಟು ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲಿ ಉಳಿದ ಚಿತ್ರೀಕರಣ ಮುಗಿಸಿ, ಪರಿಚಯಾತ್ಮಕ ಹಾಡಿಗಾಗಿ ಅಕ್ಟೋಬರ್ 25 ರಂದು ಬ್ಯಾಂಕಾಕ್ ಗೆ ತೆರಳುತ್ತಿರುವುದಾಗಿ ತಿಳಿಸುತ್ತಾರೆ ಚಿಂತನ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT