ನೂತನ 'ನಾಗರಹಾವು' ಸಿನೆಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಮೂಡಿರುವ ವಿಷ್ಣುವರ್ಧನ್ 
ಸಿನಿಮಾ ಸುದ್ದಿ

ಕನ್ನಡಿಗರಿಗೆ ಅಜರಾಮರರಾಗಿ ಉಳಿದಿರುವ ವಿಷ್ಣು ಮತ್ತು ನಾಗರಹಾವು

ಕನ್ನಡ ಸಿನೆಮಾರಂಗದ ದಂತಕಥೆ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ತಂತ್ರಜ್ಞಾದಲ್ಲಿ ಮತ್ತೆ ತೆರೆಯಮೇಲೆ ತಂದಿರುವುದಕ್ಕೆ ನೂತನ 'ನಾಗರಹಾವು' ಸಿನೆಮಾ ಬಹಳಷ್ಟು ಸುದ್ದಿ ಮಾಡಿದೆ.

ಬೆಂಗಳೂರು: ಕನ್ನಡ ಸಿನೆಮಾರಂಗದ ದಂತಕಥೆ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ತಂತ್ರಜ್ಞಾದಲ್ಲಿ ಮತ್ತೆ ತೆರೆಯಮೇಲೆ ತಂದಿರುವುದಕ್ಕೆ ನೂತನ 'ನಾಗರಹಾವು' ಸಿನೆಮಾ ಬಹಳಷ್ಟು ಸುದ್ದಿ ಮಾಡಿದೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಲನಚಿತ್ರ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು, ಬಿಡುಗಡೆಗೂ ಮುಂಚಿತವಾಗಿಯೇ 100 ಕೋಟಿ ವ್ಯವಹಾರ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಲವರ ಹುಬ್ಬೇರಿಸಿದೆ. 
ಈ ನಡುವೆ ವಿಷ್ಣುವರ್ಧನ್ ಅವರು ಭೌತಿಕವಾಗಿ ದೂರವಾಗಿದ್ದರು, ಕನ್ನಡ ಚಿತ್ರರಂಗದವರ ಕಲ್ಪನೆಯಲ್ಲಿ ಅವರು ಇನ್ನು ಜೀವಂತವಾಗಿರುವುದೇ ವಿಶೇಷ. ನಟ ಸುದೀಪ್ ಅವರ ಎರಡು ಸಿನೆಮಾಗಳು 'ವಿಷ್ಣುವರ್ಧನ' ಮತ್ತು 'ಕೋಟಿಗೊಬ್ಬ-2' ಮೇರು ನಟನಿಗೆ ಗೌರವ ಸಲ್ಲಿಸಿದ ಸಿನೆಮಾಗಳೇ! ಸಂತೋಷ್ ಆನಂದರಾಮ್ ನಿರ್ದೇಶನದ ಯಶ್ ಅಭಿನಯದ ಮಿ&ಮಿಸೆಸ್ ರಾಮಾಚಾರಿ ಸಿನೆಮಾದಲ್ಲಿ, ಯಶ್ ಅವರನ್ನು ಕೋಪಯುಕ್ತ ಯುವಕನಾಗಿ ತೋರಿಸಲಾಗಿತ್ತು. ಆ ಪಾತ್ರದ ಹೆಸರು ಮತ್ತು ಸ್ವಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರ ಹಾವು' ಸಿನೆಮಾದ ವಿಷ್ಣುವರ್ಧನ್ ಪಾತ್ರ ರಾಮಾಚಾರಿಯಿಂದ ಸ್ಫೂರ್ತಿ ಪಡೆದು ಗೌರವಿಸಿತ್ತು. 
ಈಗ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಶಿವರಾಜ್ ಕುಮಾರ್ ನಟನೆಯ 'ಶ್ರೀಕಂಠ' ಕೂಡ ನಾಗರಹಾವಿನ ಮತ್ತು ವಿಷ್ಣು ಶೈಲಿಯನ್ನು ತನ್ನದಾಗಿಸಿಕೊಂಡಿದೆ. ಸಿನೆಮಾದ ಟ್ರೇಲರ್ ನಲ್ಲಿ ವಿಷ್ಣುವರ್ಧನ್ ಅವರ ಸುಪ್ರಸಿದ್ಧ ಶೈಲಿಯನ್ನು ನಟ ಶಿವರಾಜ್ ಕುಮಾರ್ ಅನುಸರಿಸಿದ್ದರೆ, ಹಿನ್ನಲೆಯಲ್ಲಿ 'ಹಾವಿನ ದ್ವೇಷ ಹನ್ನೆರಡು ವರ್ಷ' ಹಾಡು ಮೊಳಗುತ್ತಿರುತ್ತದೆ. 
ಈಗ ದಿಗಂತ್ ಮತ್ತು ರಮ್ಯಾ ಅಭಿನಯದ 'ನಾಗರಹಾವು' ಶುಕ್ರವಾರ ತೆರೆಕಾಣಲು ಸಿದ್ಧವಾಗಿದ್ದು, ವಿಷ್ಣುವರ್ಧನ್ ಕನ್ನಡಿಗರಿಗೆ ಅಜರಾಮರಾಗಿ ಉಳಿದಿರುವುದನ್ನು ಮತ್ತೆ ನೆನಪಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT