'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ದೀಪಾವಳಿಗೆ ಧಮಾಕಾಗೆ ಸಿದ್ಧವಾಗಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್'

'ಸಂತು ಸ್ಟ್ರೈಟ್ ಫಾರ್ವರ್ಡ್' ದೀಪಾವಳಿ ಧಮಾಕಾಗೆ ಸಿದ್ಧವಾಗಿದೆ. ನಿರ್ದೇಶಕ ಮಹೇಶ್ ರಾವ್ ಮತ್ತು ನಟ ಯಶ್ ಜೋಡಿ ಆರು ತಿಂಗಳಲ್ಲಿ ಈ ಸಿನೆಮಾ ಮಾಡಿ ಮುಗಿಸಿರುವುದು ವಿಶೇಷ.

ಬೆಂಗಳೂರು: 'ಸಂತು ಸ್ಟ್ರೈಟ್ ಫಾರ್ವರ್ಡ್' ದೀಪಾವಳಿ ಧಮಾಕಾಗೆ ಸಿದ್ಧವಾಗಿದೆ. ನಿರ್ದೇಶಕ ಮಹೇಶ್ ರಾವ್ ಮತ್ತು ನಟ ಯಶ್ ಜೋಡಿ ಆರು ತಿಂಗಳಲ್ಲಿ ಈ ಸಿನೆಮಾ ಮಾಡಿ ಮುಗಿಸಿರುವುದು ವಿಶೇಷ. ಅವರು ಮೊದಲು ತಮಿಳು ಸಿನೆಮಾ 'ವಾಲು' ರಿಮೇಕ್ ಮಾಡಲು ನಿಶ್ಚಯಿಸಿದ್ದು ನಂತರ ಸ್ವಂತ ಸ್ಕ್ರಿಪ್ಟ್ ಸಂತುವಿನೊಂದಿಗೆ ಸಿನೆಮಾ ಮುಗಿಸಿದ್ದಾರೆ. 
"ನಾವು 110 ದಿನಗಳವರೆಗೆ ಚಿತ್ರೀಕರಣ ಮಾಡಿದೆವು ಮತ್ತು ಸರಿಯಾಗಿ ಯೋಜಿಸಿಕೊಂಡು ಚಿತ್ರೀಕರಣದ ಕೆಲಸಗಳನ್ನು ಬೇಗನೆ ಮಾಡಿ ಮುಗಿಸಿದೆವು. ಯಶ್ ಅವರ ಸ್ಟಾರ್ ಗಿರಿಯ ಬಗ್ಗೆ ಚಿಂತಿಸಿ 'ವಾಲು' ರಿಮೇಕ್ ಮಾಡುವುದಕ್ಕೆ ತಿಲಾಂಜಲಿ ನೀಡಿ ಸ್ವಂತ ಸ್ಕ್ರಿಪ್ಟ್ ಮಾಡಿದೆವು. ನಿರ್ಮಾಪಕರಿಗೆ ರಿಮೇಕ್ ನಲ್ಲಿ ಒಲವಿತ್ತಾದರೂ ಆ ಪಾತ್ರ ಯಶ್ ವರಿಗೆ ಹೊಂದುತ್ತಿರಲಿಲ್ಲ" ಎನ್ನುತ್ತಾರೆ ನಿರ್ದೇಶಕ ಮಹೇಶ್. 
"ನಾನು ಯಶ್ ಮತ್ತು ರಾಧಿಕಾ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಆದುದರಿಂದ ಚಿತ್ರೀಕರಣ ಅನುಭವ ಅದ್ಭುತವಾಗಿತ್ತು. ಈ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ತಾಜಾವಾಗಿದೆ ಎಂದು ನಂಬಿದ್ದೇನೆ" ಎನ್ನುತ್ತಾರೆ 'ಕೇಸ್ ನಂ 18/9', 'ಎಂದೆಂದಿಗೂ ನಿನಗಾಗಿ'. 'ಕ್ವಾಟ್ಲೆ ಸತೀಶ' ಚಿತ್ರಗಳ ನಿರ್ದೇಶಕ. 
ಆಂಡ್ರ್ಯು ಛಾಯಾಗ್ರಹಣ ಮಾಡಿದ್ದು ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಿನೆಮಾದಲ್ಲಿ ಸುಮಾರು 13 ವಿಲನ್ ಗಳು ಇದ್ದಾರಂತೆ. ಅಕ್ಟೋಬರ್ 28 ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT