ಬೆಂಗಳೂರು: ವಿವಿಧ ಬಗೆಯ ಸಿನೆಮಾಗಳಲ್ಲಿ ಪ್ರಯೋಗಕ್ಕೆ ಒಗ್ಗಿಕೊಂಡ ನಟ ಪ್ರಜ್ವಲ್ ದೇವರಾಜ್, ಪ್ರಾರಂಭಿಕ ದಿನಗಳಲ್ಲಿ ತಮಗೆ ಹೆಸರು ತಂದುಕೊಟ್ಟ ಭೂಗತ ವಿಷಯದ ಸಿನೆಮಾಗಳಾದ 'ಗೆಳೆಯ' ಮತ್ತು 'ಜೀವ' ರೀತಿಯ ಸಿನೆಮಾಗಳಿಗೆ ಮತ್ತೆ ಮೊರೆ ಹೋಗಿದ್ದಾರೆ. ಮಾಫಿಯಾ ವಿಷಯದ 'ಠಾಕ್ರೆ' ಸಿನೆಮಾದಲ್ಲಿ ಪ್ರಜ್ವಲ್ ನಟಿಸಲು ಸಿದ್ಧರಾಗಿದ್ದು, ಈ ಸಿನೆಮಾಗೂ ಮುಂಬೈ ದಿವಂಗತ ರಾಜಕಾರಣಿ ಭಾಳಾ ಸಾಹೇಬ್ ಠಾಕ್ರೆ ಮತ್ತು ಅವರ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಕೂಡಲೇ ಸ್ಪಷ್ಟಪಡಿಸಿದ್ದಾರೆ.
"ಈ ಶೀರ್ಷಿಕೆ ಅತಿ ಹೆಚ್ಚು ಶಕ್ತಿಯುತವಾಗಿ ಕೇಳಿಸುತ್ತದೆ ಆದುದರಿಂದ ನಿರ್ದೇಶಕ ಗುರು ದೇಶಪಾಂಡೆ ಈ ಹೆಸರನ್ನು ಉಳಿಸಿಕೊಂಡಿದ್ದಾರೆ. ಸಿನೆಮಾ ನಿರ್ದೇಶನದಲ್ಲಿ ಸರ್ಕಾರ್ ಸಿನೆಮಾದ ಕೆಲವು ಛಾಯೆಗಳು ಕಾಣಿಸಿಕೊಳ್ಳಲಿವೆ" ಎನ್ನುತ್ತಾರೆ ಪ್ರಜ್ವಲ್.
ನಟ ಸಿನಿಮಾಗಾಗಿ ಕೂದಲು ಬೆಳೆಸುತ್ತಿದ್ದು, ಸಂಪೂರ್ಣ ಮೇಕೋವರ್ ಗೆ ಒಳಗಾಗಲಿದ್ದಾರಂತೆ. "ನಾನು ಪಾತ್ರದ ಒಳ್ಳೆಯ ಮತ್ತು ಕೆಟ್ಟ ಛಾಯೆಗಳನ್ನು ಸಮತೋಲನ ಮಾಡುತ್ತಿದ್ದೇನೆ. .. ಸ್ವಲ್ಪ ಅಜಯ್ ದೇವ್ಗನ್ ರೀತಿಯಲ್ಲಿ" ಎನ್ನುತ್ತಾರೆ ನಟ.
ಈ ಮೊದಲು ಈ ಪಾತ್ರಕ್ಕೆ ಆದಿತ್ಯ ಆಯ್ಕೆಯಾಗಿದ್ದ ಬಗ್ಗೆ ಪ್ರಶ್ನಿಸಿದಾಗ, ಅದರ ಬಗ್ಗೆ ನನಗೇನು ತಿಳಿದಿಲ್ಲ ಎನ್ನುವ ಪ್ರಜ್ವಲ್ "ಗುರು ಅವರು ಈ ಪಾತ್ರಕ್ಕೆ ನಾನು ನ್ಯಾಯ ಒದಗಿಸಬಲ್ಲೆ ಎಂದರು. ನಾನು ಈ ವಿಷಯದ ಬಗ್ಗೆ ಅವಲೋಕಿಸಿ ಎರಡು ದಿನ ಸಮಯ ತೆಗೆದುಕೊಂಡು ಒಪ್ಪಿಗೆ ನೀಡಿದೆ" ಎನ್ನುತ್ತಾರೆ.
ಈ ಸಿನೆಮಾದಲ್ಲಿ ರವಿಚಂದ್ರನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿತ್ತಿದ್ದಾರೆ. ಸದ್ಯಕ್ಕೆ ಪ್ರಜ್ವಲ್ 'ಚೌಕ' ಸಿನಿಮಾ ಸಂಪೂರ್ಣಗೊಳಿಸಿದ್ದಾರೆ.