ಬಿಗ್ ಬಾಸ್ ಪ್ರೋಮೋದಲ್ಲಿ ನಟ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಮತ್ತೆ ಬರಲಿರುವ ಬಿಗ್ ಬಾಸ್!

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಕನ್ನಡ ಅವತರಣಿಕೆ ಈಗಾಗಲೇ ಕನ್ನಡ ಪ್ರೇಕ್ಷಕರಿಗೆ...

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಕನ್ನಡ ಅವತರಣಿಕೆ ಈಗಾಗಲೇ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿ ಮೂರು ಸೀಸನ್ ಗಳು ಪ್ರಸಾರಗೊಂಡಿವೆ. ಇದೀಗ ನಾಲ್ಕನೇ ಸೀಸನ್ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಿದೆ.  ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಲಿದೆಯಂತೆ. ಕಾರ್ಯಕ್ರಮವನ್ನು ಈ ಹಿಂದಿನಂತೆ ಕಿಚ್ಚ ಸುದೀಪ್ ಅವರೇ ನಿರ್ವಹಿಸುತ್ತಾರಂತೆ.
ಬಿಗ್ ಬಾಸ್ ಸೀಸನ್ -3 ನಡೆದ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲೇ ಈ ಬಾರಿಯ ಸೀಸನ್ -4 ಗೂ ಕೂಡ ಬಿಗ್ ಬಾಸ್ ಮನೆ ನಿರ್ಮಾಣವಾಗಲಿದೆಯಂತೆ. ಅಲ್ಲಿ ಈಗಾಗಲೇ ಕೆಲಸ ಆರಂಭಗೊಂಡಿದೆ. ಇನ್ನು ಸೀಸನ್ 4 ನ ಪ್ರೋಮೋ ಕೂಡ ಶೂಟಿಂಗ್ ಆಗಿದೆ. ಅಕ್ಟೋಬರ್ ಕೊನೆಯ ವೇಳೆಗೆ ಕಾರ್ಯಕ್ರಮ ಆರಂಭವಾಗುವ ಸೂಚನೆಯಿದೆ ಎನ್ನುತ್ತವೆ ಮೂಲಗಳು. 
ಇಷ್ಟೆಲ್ಲಾ ಆದ ಬಳಿಕ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಪ್ರವೇಶಿಸುತ್ತಾರೆ ಎಂಬ ಮಾತುಗಳು ಸಹಜವಾಗಿ ಪ್ರೇಕ್ಷಕರಿಗೆ ಇರುತ್ತದೆ. ಕಲರ್ಸ್ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸುವವರು ಒಂದಷ್ಟು ಸೆಲೆಬ್ರಿಟಿಗಳನ್ನು, ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರಂತೆ. ಒಂದಷ್ಟು ಜನರ ಹೆಸರುಗಳನ್ನು ಕಲೆಹಾಕಿ ಪಟ್ಟಿ ಎ ಮತ್ತು ಪಟ್ಟಿ ಬಿ ಎಂದು ಮಾಡಲಾಗಿದೆಯಂತೆ. 
ಸಂಭವನೀಯ ಸೆಲೆಬ್ರಿಟಿಗಳ ಪೈಕಿ ನಟರಾದ ನವೀನ್ ಕೃಷ್ಣ. ಲೂಸ್ ಮಾದ ಯೋಗಿ, ನಟಿಯರಾದ ಐಂದ್ರಿತಾ ರೇ, ಶುಭಾ ಪೂಂಜ, ಕಾರುಣ್ಯ ರಾಮ್ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ. ಮೊದಲು ಟಿವಿ 9 ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ, ಹಿರಿಯ ನಟಿ ವನಿತಾ ವಾಸು ಮೊದಲಾದವರಿಗೂ ಕೂಡ ವಾಹಿನಿ ಕಡೆಯಿಂದ ಕರೆ ಹೋಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇವರ್ಯಾರೂ ಫೈನಲ್ ಅಲ್ಲ.
ಇನ್ನು ಹೆಸರಾಂತ ನಟಿಯರಾದ ರಚಿತಾ ರಾಮ್, ತುಪ್ಪದ ಹುಡುಗಿ ರಾಗಿಣಿ ಮೊದಲಾದವರ ಮೇಲೂ ಬಿಗ್ ಬಾಸ್ ಮನೆ ಕಣ್ಣಿಟ್ಟಿದೆಯಂತೆ. ಆದರೆ ಇವರು ಆ ಮನೆ ಪ್ರವೇಶಿಸಲು ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ. 
ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಸೆಲೆಬ್ರಿಟಿಗಳ ಪಟ್ಟಿ ವಾಹಿನಿ ಕಡೆಯಿಂದ ಹೊರಬೀಳುವವರೆಗೆ ಊಹಾಪೋಹಗಳು ಹರಿದಾಡುತ್ತಿರುತ್ತವೆ. ಒಂದಂತೂ ಸತ್ಯ, ಒಂದಷ್ಟು ವಿವಾದ ಎಬ್ಬಿಸಿದವರನ್ನು, ಕರ್ನಾಟಕದಲ್ಲಿ ಹೆಚ್ಚು ಸುದ್ದಿಯಾದವರನ್ನು ವಾಹಿನಿ ಕರೆತರುವುದಂತೂ ದಿಟ. ಅಲ್ಲಿಯವರೆಗೆ ಕುತೂಹಲ ಹಾಗೇ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT