ಬಾಲಿವುಡ್ ನಟಿ ಕರೀನಾ ಕಪೂರ್ 
ಸಿನಿಮಾ ಸುದ್ದಿ

ನಾನೊಬ್ಬಳು 'ಸೆಲ್ಫೀ ಕ್ವೀನ್': ಕರೀನಾ ಕಪೂರ್

ನಾನೊಬ್ಬಳು ಸೆಲ್ಫೀ ಕ್ವೀನ್ ಆಗಿದ್ದು, ನನಗೆ ಸೆಲ್ಫೀ ಗೀಳಿದೆ. ಪ್ರತೀ 5 ರಿಂದ 10 ನಿಮಿಷಗಳಿಗೊಮ್ಮೆ ಸೆಲ್ಫೀ ತೆಗೆದುಕೊಳ್ಳುತ್ತಿರುತ್ತೇನೆಂದು ಬಾಲಿವುಡ್ ನಟಿ ಕರೀನಾ ಕಪೂರ್...

ಮುಂಬೈ: ನಾನೊಬ್ಬಳು ಸೆಲ್ಫೀ ಕ್ವೀನ್ ಆಗಿದ್ದು, ನನಗೆ ಸೆಲ್ಫೀ ಗೀಳಿದೆ. ಪ್ರತೀ 5 ರಿಂದ 10 ನಿಮಿಷಗಳಿಗೊಮ್ಮೆ ಸೆಲ್ಫೀ ತೆಗೆದುಕೊಳ್ಳುತ್ತಿರುತ್ತೇನೆಂದು ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವ 'ವೋಗ್ ಬಿಎಫ್ಎಫ್' ಕಾರ್ಯಕ್ರಮದ ಶೂಟಿಂಗ್ ವೊಂದರಲ್ಲಿ ಫ್ಯಾಷನ್ ಡಿಸೈನರ್ ಗೆಳೆಯ ಮನೀಶ್ ಮಲ್ಹೋತ್ರಾ ಅವರೊಂದಿಗೆ ಭಾಗಿಯಾಗಿ ಮಾತನಾಡಿರುವ ಕರೀನಾ, ತಾವೊಬ್ಬ ಸೆಲ್ಫೀ ಕ್ವೀನ್ ಎಂದು ಕರೆದುಕೊಂಡಿದ್ದಾರೆ.

ನಿಮ್ಮ ಮೊಬೈಲ್ ಫೋನ್ ನಲ್ಲಿ ಕೊನೆಯ ಬಾರಿಗೆ ಫೋಟೋ ತೆಗೆದದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನನಗೆ ಸೆಲ್ಫೀ ಗೀಳಿದ್ದು, ಪ್ರತೀ 5 ರಿಂದ 10 ನಿಮಿಷಗಳಿಗೊಮ್ಮೆ ಸೆಲ್ಫೀ ತೆಗೆದುಕೊಳ್ಳುತ್ತಿರುತ್ತೇನೆಂದು ಹೇಳಿದ್ದಾರೆ.

ಯಾವುದೇ ಕೆಲಸ ಅಥವಾ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನಾನು ಪೂರ್ವ ತಯಾರಿ ಮಾಡುವುದಿಲ್ಲ. ಮನೀಶ್ ಅವರು ನನಗೆ ಸಹೋದರನಿದ್ದಂತೆ. ನನ್ನ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ನನ್ನ ಹೃದಯ ಆ ಕ್ಷಣಕ್ಕೆ ಏನು ಹೇಳುವುದೋ ಅದನ್ನೇ ನಾನು ಮಾಡುತ್ತೇನೆ. ಚಿಕ್ಕವಳಿದ್ದಾಗಿನಿಂದಲೂ ನಾನು ದೊಡ್ಡ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಿದ್ದೆ ಎಂದಿದ್ದಾರೆ.

ಮನೀಶ್ ಅವರೂ ಕರೀನಾ ಬಗ್ಗೆ ಮಾತನಾಡಿದ್ದು, ನಾನು ಮೊದಲ ಬಾರಿಗೆ ಕರೀನಾಳನ್ನು ನೋಡಿದ್ದು 9 ವರ್ಷದ ಬಾಲಕಿಯಾಗಿದ್ದಾಗ. ಕರೀಷ್ಮಾ ಹಾಗೂ ಅವರ ತಾಯಿಯನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆ. ಕರೀಷ್ಮಾ ಅವರೊಂದಿಗೆ ಮಾತನಾಡುತ್ತಿದ್ದಾಗ ಕರೀನಾ ತೀವ್ರ ಕೂತೂಹಲ ಹಾಗೂ ಗಮನವಿಟ್ಟು ಕೇಳುತ್ತಿದ್ದಳು. ನಾನು ಯಾವಾಗ ಈ ಸ್ಥಾನಕ್ಕೆ ಹೋಗುತ್ತೀನೋ ಎಂಬ ಆಲೋಚನೆ ಆಕೆಯ ಕಣ್ಣಲ್ಲಿ ಕಾಣುತ್ತಿತ್ತು. ಇದು ನನಗೆ ಬಹಳ ಇಷ್ಟವಾಗಿತ್ತು. ಆಗಲೇ ಅಂದುಕೊಂಡಿದ್ದೆ. ಈಕೆ ದೊಡ್ಡ ಸ್ಟಾರ್ ಆಗುತ್ತಾಳೆಂದು ಎಂದು ಹೇಳಿದ್ದಾರೆ.

ಎಷ್ಟು ನಕಲಿ ಹೊಗಳಿಕೆಗಳು ಹಾಗೂ ಮೆಚ್ಚುಗೆಗಳನ್ನು ಪಡೆದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕರೀನಾ, ಈ ವರೆಗೂ ನಾನು ಪಡೆದಿರುವ ಮೆಚ್ಚುಗೆ ಹಾಗೂ ಹೊಗಳಿಕೆಗಳು ನಕಲಿಯಾಗಿಲ್ಲ. ನಕಲಿ ಮೆಚ್ಚುಗೆಗಳಿಗೆ ನಾನು ಯೋಗ್ಯವಾದವಳಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT