ನಾಗರಹಾವು ಸಿನೆಮಾದ ಭಿತ್ತಿಚಿತ್ರ 
ಸಿನಿಮಾ ಸುದ್ದಿ

ಬಿಡುಗಡೆಗೆ ಮುಂಚೆಯೇ 100 ಕೋಟಿ ಬಾಚಿದ 'ನಾಗರಹಾವು'; ಅಕ್ಟೋಬರ್ 14 ಕ್ಕೆ ಬಿಡುಗಡೆ

ಕೋಡಿ ರಾಮಕೃಷ್ಣ ನಿರ್ದೇಶನದ ದ್ವಿಭಾಷಾ ಚಿತ್ರ ನಾಗರಹಾವು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವತ್ತ ದಾಪುಗಾಲು ಹಾಕಿದೆ. ಸಾಜಿದ್ ಖುರೇಷಿ ನಿರ್ಮಾಣದ ಈ ಚಿತ್ರ ಬಿಡುಗಡೆಗೆ

ಬೆಂಗಳೂರು: ಕೋಡಿ ರಾಮಕೃಷ್ಣ ನಿರ್ದೇಶನದ ದ್ವಿಭಾಷಾ ಚಿತ್ರ ನಾಗರಹಾವು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವತ್ತ ದಾಪುಗಾಲು ಹಾಕಿದೆ. ಸಾಜಿದ್ ಖುರೇಷಿ ನಿರ್ಮಾಣದ ಈ ಚಿತ್ರ ಬಿಡುಗಡೆಗೆ ಮುಂಚಿತವಾಗಿಯೇ 100 ಕೋಟಿ ರೂ ವ್ಯವಹಾರ ಮಾಡಿದೆ ಚರ್ಚೆಯಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅಕ್ಟೋಬರ್ 14 ರಂದು ಈ ಸಿನೆಮಾ ತೆರೆಗೆ ಅಪ್ಪಳಿಸಿದೆ. 
ಕನ್ನಡದಲ್ಲಿ ಥಿಯೇಟರ್ ವಿತರಣಾ ಹಕ್ಕುಗಳು 35 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿ ಇದ್ದಾರೆ, ತೆಲುಗು ವಿತರಣೆಯ ಹಕ್ಕನ್ನು 15 ಕೋಟಿ ರೂಗೆ ಸುರಕ್ಷಾ ಮೀಡಿಯಾ ಕೊಂಡಿದ್ದು, ತಮಿಳು ಭಾಷೆಯ ಹಕ್ಕುಗಳನ್ನು ತೇನಾಂದೇಲ್ ಫಿಲಂಸ್ 9 ಕೋಟಿಗೆ ಖರೀದಿಸಿದೆ ಎಂದು ತಿಳಿದುಬಂದಿದೆ. "ವಿದೇಶಿ ವಿತರಣೆಯ ಹಕ್ಕನ್ನು ಅನಿಲ್ ಕುಮಾರ್ ಅವರು 9 ಕೋಟಿಗೆ ಖರೀದಿಸಿದ್ದಾರೆ ಮತ್ತು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಟಿವಿ ವಾಹಿನಿ ಹಕ್ಕುಗಳು 16 ಕೋಟಿಗೆ ಮಾರಾಟವಾಗಿದೆ. ಹಿಂದಿಗೆ ಡಬ್ಬಿಂಗ್ ಮಾಡಲು 9 ಕೋಟಿಗೆ ಮಾರಾಟ ಮಾಡಲಾಗಿದೆ. ಬಿಡುಗಡೆಗೆ ಮುಂಚಿತವಾಗಿಯೇ ನಾವು 100 ಕೋಟಿ ವ್ಯವಹಾರ ಮಾಡುವ ಭರವಸೆ ಇದೆ" ಎನ್ನುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.
ಸಿನೆಮಾ ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಅವರು. ಈ ಸಿನೆಮಾದಲ್ಲಿ ದಿವಂಗತ ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್ ಅವರು ಗ್ರಾಫಿಕ್ಸ್ ತಂತ್ರಜ್ಞಾನದ ನೆರವಿನಿಂದ 9 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರಂತೆ. ತೆಲುಗು ಸಿನೆಮಾಗಳಾದ 'ಈಗ' ಮತ್ತು 'ಬಾಹುಬಲಿ' ಸಿನೆಮಾಗಳಿಗೆ ಗ್ರಾಫಿಕ್ಸ್ ಮಾಡಿದ್ದ ಮಕುಟ ವಿ ಎಫ್ ಎಕ್ಸ್ ಈ ಸಿನೆಮಾಗೂ ಗ್ರಾಫಿಕ್ಸ್ ನೆರವು ನೀಡಿದ್ದು, ಇದಕ್ಕೆ ನಿರ್ಮಾಪಕರಿಗೆ ತಗಲಿರುವ ವೆಚ್ಚ ಬರ್ರೋಬರಿ 15 ಕೋಟಿ.
ನಾಗರಹಾವಿನಲ್ಲಿ ಈ ಗ್ರಾಫಿಕ್ಸ್ ಕೆಲಸ ನೋಡಿ ಮೆಚ್ಚಿರುವ ತೆಲುಗು ನಟ ನಾಗಾರ್ಜುನ ಈಗ ಅವರ ತಂದೆ ತೆಲುಗು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಮತ್ತೆ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರಂತೆ. 
ದಿಗಂತ್ ಮತ್ತು ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ 120 ಅಡಿ ಹಾವು ಕೂಡ ಕಾಣಿಸಿಕೊಳ್ಳಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT