'ಮಾಸ್ತಿ ಗುಡಿ' ಸಿನೆಮಾದಲ್ಲಿ ದುನಿಯಾ ವಿಜಯ್ 
ಸಿನಿಮಾ ಸುದ್ದಿ

'ಮಾಸ್ತಿ ಗುಡಿ' ವಿತರಣಾ ಹಕ್ಕುಗಳು ೧೦.೫೦ ಕೋಟಿ ರೂಗೆ ಮಾರಾಟ!

ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿ, ನಂತರ ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಹಿನ್ನಲೆಗೆ ಸರಿದಿತ್ತು. ಈಗ ವಿತರಕ ಜ್ಯಾಕ್ ಮಂಜು

ಬೆಂಗಳೂರು: ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿ, ನಂತರ ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಹಿನ್ನಲೆಗೆ ಸರಿದಿತ್ತು. ಈಗ ವಿತರಕ ಜ್ಯಾಕ್ ಮಂಜು ಈ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿರುವುದಾಗಿ ತಿಳಿದಿದೆ. 
ಮಂಜು ಈ ಸಿನೆಮಾದ ಹಕ್ಕುಗಳನ್ನು ಭರ್ಜರಿ ೧೦.೫೦ ಕೋಟಿ ರೂಗಳಿಗೆ ಕೊಂಡಿದ್ದಾರೆ. ಈ ಸಿನೆಮಾ ನೋಡಿ ಇದರ ಮೌಲ್ಯವನ್ನು ಗೊತ್ತು ಮಾಡಿದೆ ಎನ್ನುತ್ತಾರೆ ವಿತರಕ. ದುನಿಯಾ ವಿಜಯ್ ನಟನೆಯ ಸಿನೆಮಾಗಳಲ್ಲೆಲ್ಲಾ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾಗಿರುವ ಸಿನೆಮಾ ಇದು. 
ನಾಗಶೇಖರ್ ನಿರ್ದೇಶನದ ಹಿಂದಿನ ಚಿತ್ರಗಳಾದ 'ಅರಮನೆ', 'ಸಂಜು ವೆಡ್ಸ್ ಗೀತಾ', 'ಮೈನಾ' ಇವೆಲ್ಲವೂ ಎಲ್ಲ ರೀತಿಯ ವೀಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿರುವುದರಿಂದ 'ಮಾಸ್ತಿ ಗುಡಿ' ಸಿನೆಮಾ ಕೂಡ ಒಳ್ಳೆಯ ಮೌಲ್ಯಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. 
ಹಾಗೆಯೇ 'ಮಾಸ್ತಿ ಗುಡಿ' ಹುಲಿ ಸಂರಕ್ಷಣೆಯ ಬಗ್ಗೆಯೂ ಚರ್ಚಿಸಲಿದೆಯಂತೆ. ಈ ಸಿನೆಮಾವನ್ನು ವೀಕ್ಷಿಸಿರುವ ಕೆಲವು ಇದನ್ನು ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಪುಲಿ ಮುರಗನ್'ಗೆ ಕೂಡ ಹೋಲಿಸಿದ್ದಾರೆ. 
ಸಾಧು ಕೋಕಿಲಾ ಸಂಗೀತ ನೀಡಿದ್ದು, ಸತ್ಯ ಹೆಗಡೆ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಈ ಸಿನೆಮಾದ ಚಿತ್ರೀಕರಣದ ವೇಳೆ ಉದಯೋನ್ಮಖ ಕಲಾವಿದರಾದ ಅನಿಲ್ ಮತ್ತು ಉದಯ್ ಅಸುನೀಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT