ರಜನಿಕಾಂತ್ 
ಸಿನಿಮಾ ಸುದ್ದಿ

ನಾನು ಉತ್ತಮ ನಟ ಎಂದು ಭಾರತೀರಾಜಾ ಯಾವತ್ತೂ ಒಪ್ಪುವುದಿಲ್ಲ: ರಜನಿಕಾಂತ್

ಹಿರಿಯ ನಿರ್ದೇಶಕ ಭಾರತೀರಾಜಾ ನನ್ನನ್ನು ಒಬ್ಬ ಉತ್ತಮ ನಟ ಎಂದು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ..

ಚೆನ್ನೈ: ಹಿರಿಯ ನಿರ್ದೇಶಕ ಭಾರತೀರಾಜಾ ನನ್ನನ್ನು ಒಬ್ಬ ಉತ್ತಮ ನಟ  ಎಂದು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. 
ನಾನು ಭಾರತೀರಾಜಾ ಅವರನ್ನು ತುಂಬಾ ಇಷ್ಟ ಪಡುತ್ತೇನೆ, ಅವರಿಗೂ ಕೂಡ ನಾನೆಂದರೇ ಅಚ್ಚು ಮೆಚ್ಚು, ಅವರ ಹಿಂದಿನ ಸಂದರ್ಶನಗಳಲ್ಲಿ ಪತ್ರಕರ್ತರು ನನ್ನ ಬಗ್ಗೆ ಭಾರತೀರಾಜಾ ಅವರ ಅಭಿಪ್ರಾಯ ಕೇಳಿದಾಗ, ಅವರೊಬ್ಬ ಉತ್ತಮ ಮನುಷ್ಯ ಎಂದು ಹೇಳಿದ್ದಾರೆ. ನಿರ್ದೇಶಕ ಭಾರತೀರಾಜಾ ಅವರ ಮುಂದಿನ 16 ವಯದಿನಿಲೆ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿದ್ದಾರೆ. 
ಭಾರತಾರಾಜಾ ಅವರ ಬಿಐಸಿಸಿ (ಭಾರತೀರಾಜಾ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫಅ ಸಿನಿಮಾ) ಸಂಸ್ಥೆ ಉದ್ಘಾಟಿಸಿ ಮಾತನಾಡಿದ ರಜನಿಕಾಂತ್, ನಾನೊಬ್ಬ ಉತ್ತಮ ಕಲಾವಿದ ಎಂಬುದನ್ನು ಭಾರತೀರಾಜಾ ಒಪ್ಪಿಕೊಂಡಿಲ್ಲ, ನಾನು ಯಾವಾಗಲೂ ಇದನ್ನು ತಲೆಯಲ್ಲಿಟ್ಟುಕೊಂಡು, ಜನ ಹೇಗೆ ನನ್ನನ್ನು ನಟ ಎಂದು ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
40 ದಶಕಗಳ ಸುದೀರ್ಘ ಸಿನಿಮಾ ವೃತ್ತಿ ಜೀವನದಲ್ಲಿ ಭಾರತೀರಾಜಾ ಕೇವಲ ಎರಡು ಬಾರಿ ಮಾತ್ರ ನನ್ನ ಸಮಯ ಕೇಳಿದ್ದಾರೆ. ಮೊದಲಯನೆಯದು 16 ವಯದಿನಿಲೆ ಸಿನಿಮಾಗಾಗಿ, 2ನೇ ಯದು ಸಿನಿಮಾ ಸಂಸ್ಥೆ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದರು ಎಂದು ರಜನಿ ಹೇಳಿದ್ದಾರೆ.
ನಾನು ಇದೇ ಸಂಸ್ಥೆಯ ವಿದ್ಯಾರ್ಥಿ, ಜೊತೆಗೆ ನಾನು ನನ್ನ ಗುರು ದಿವಂಗತ ಕೆ.ಬಾಲಚಂದರ್ ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ರಜನಿಕಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT