'ಒಂದು ಮೊಟ್ಟೆಯ ಕಥೆ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ನಿರ್ದೇಶಕ ಪವನ್ ಕುಮಾರ್ ಅರ್ಪಿಸುತ್ತಿರುವ 'ಒಂದು ಮೊಟ್ಟೆಯ ಕಥೆ'; ಗಮನ ಸೆಳೆದ ಟ್ರೇಲರ್

'ಲೂಸಿಯಾ', 'ಯು ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ಇಂದು ಬಿಡುಗಡೆ ಮಾಡಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾ ಟ್ರೇಲರ್ ಸಿನೆಮಾ ರಸಿಕರ ಗಮನ ಸೆಳೆದಿದೆ.

ಬೆಂಗಳೂರು: 'ಲೂಸಿಯಾ', 'ಯು ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ಇಂದು ಬಿಡುಗಡೆ ಮಾಡಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾ ಟ್ರೇಲರ್ ಸಿನೆಮಾ ರಸಿಕರ ಗಮನ ಸೆಳೆದಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಈ ಸಿನೆಮಾವನ್ನು ಈಗ ಪವನ್ ಕುಮಾರ್ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಪವನ್ ಕುಮಾರ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆಗೆ ಸಿದ್ಧರಾಗಿದ್ದಾರೆ. 
"ಈ ಸಿನೆಮಾದ ಪೋಸ್ಟರ್ ದೊಡ್ಡ ಹಿಟ್ ಆಗಿತ್ತು" ಎನ್ನುವ ಪವನ್ "ಏಕೆಂದರೆ ಇದು ಬೋಳು ತಲೆಯವನ ಬಗ್ಗೆ ಮಾತನಾಡುತ್ತಿತ್ತು ಮತ್ತು ಈಗ ಟ್ರೇಲರ್ ಈ ಸಿನೆಮಾದ ಬಗ್ಗೆ ಪರಿಚಯ ನೀಡಲಿದೆ" ಎನ್ನುತ್ತಾರೆ. 
ಈಗ ಈ ಸಿನೆಮಾದ ಪ್ರೀಮಿಯರ್ ಮೇ ೬ ರಂದು ನ್ಯೂಯಾರ್ಕ್ ನಲ್ಲಿ ಜರುಗಲಿದ್ದು, ಪವನ್ ಕುಮಾರ್ ಮತ್ತು ತಂಡ ಪ್ರವಾಸಕ್ಕೆ ಸಿದ್ಧವಾಗಿದೆ. 
"ಅಮೆರಿಕದಾದ್ಯಂತ ನಾವು ಈ ಸಿನೆಮಾ ತೋರಿಸುವ ಯೋಜನೆ ರೂಪಿಸಿಕೊಂಡಿದ್ದು, ಏಳು ಎಂಟು ನಗರಗಳಲ್ಲಿ ಇದನ್ನು ತೋರಿಸಲಿದ್ದೇವೆ" ಎನ್ನುತ್ತಾರೆ ಪವನ್. 
ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ಜಂಟಿಯಾಗಿ ನಿರ್ಮಿಸಿರುವ ಈ ಸಿನೆಮಾದಲ್ಲಿ ಮಿಧುನ್ ಮುಕುಂದನ್, ಸೀತೇಶ್ ಸಿ ಗೋವಿಂದ್, ರಾಜೇಶ್ ಕುಡ್ಲ, ಪ್ರವೀಣ್, ಪ್ರತೀಕ್ ಶೆಟ್ಟಿ ಮುಂತಾದವರು ಕೆಲಸ ಮಾಡಿದ್ದಾರೆ. 
ಈ ಸಿನೆಮಾದ ಟ್ರೇಲರ್ ಇಲ್ಲಿ ವೀಕ್ಷಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT