ಸಿನಿಮಾ ಸುದ್ದಿ

ಕನ್ನಡಿಗನ ಚಿತ್ರಕ್ಕೆ ಮೆಚ್ಚುಗೆ: ರಾಜಮೌಳಿ 'ದೇವರ ಮಗು' ಎಂದ ರಜನಿಕಾಂತ್

Manjula VN
ನವದೆಹಲಿ: ಮೂಲತಃ ಕನ್ನಡಿಗನೇ ಆಗಿದ್ದರೂ ಟಾಲಿವುಡ್ ನಲ್ಲಿ ಹೆಸರಾಂತ ನಿರ್ದೇಶನಾಗಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ದೇಶದಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿರುವ ಬಾಹುಬಲಿ-2 ದಿ ಕನ್ ಕ್ಲ್ಯೂಷನ್ ಚಿತ್ರಕ್ಕೆ ರಜನಿಕಾಂತ್ ಅವರು ಮಾರುಹೋಗಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಾಹುಬಲಿ-2 ಚಿತ್ರವನ್ನು ಕೊಂಡಾಡಿದ್ದಾರೆ. 
ಬಾಹುಬಲಿ-2 ಸಿನಿಮಾ ಭಾರತದ ಚಿತ್ರಲೋಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ನಿರ್ದೇಶಖ ಎಸ್ಎಸ್ ರಾಜಮೌಳಿ ದೇವರು ಕೊಟ್ಟ ಮಗುವಾಗಿದ್ದು, ರಾಜಮೌಳಿ ಮತ್ತು ಅವರ ತಂಡಕ್ಕೆ ಸಲ್ಯೂಟ್ ಎಂದು ಹೇಳಿದ್ದಾರೆ.
  ರಜನಿಕಾಂತ್ ಅವರ ಈ ಪ್ರತಿಕ್ರಿಯೆ ರಾಜಮೌಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಲೈವಾ...ದೇವರೆಂದು ಪರಿಗಣಿಸುವವರೇ ನಮ್ಮನ್ನು ಆಶೀರ್ವದಿಸಿದ್ದಾರೆ. ಇದಕ್ಕಿಂದ ದೊಡ್ಡದು ಬೇರಿಲ್ಲ ಎಂದು ನಮಸ್ಕರಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ದಗ್ಗುಬಾಟಿ ರಾಣಾ ಕೂಡ ರಜನಿಕಾಂತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 
SCROLL FOR NEXT