ಸಿನಿಮಾ ಸುದ್ದಿ

ದಿಗಂತ್ ಮುಂದಿನ ಚಿತ್ರಕ್ಕೆ ನವ ನಿರ್ದೇಶಕ ಮಂಜುನಾಥ್ ನಿರ್ದೇಶನ

Sumana Upadhyaya
ಚೌಕ ಚಿತ್ರದ ಯಶಸ್ಸು ಮತ್ತು ಅದರಲ್ಲಿ ತಮ್ಮ  ಪಾತ್ರಕ್ಕೆ ಸಿಕ್ಕಿದ ಪ್ರಶಂಸೆ ನಂತರ ನಟ ದಿಗಂತ್ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಗೃತರಾಗಿದ್ದಾರೆ. ಇದೀಗ ದಿಗಂತ್ ಹೊಸ ನಿರ್ದೇಶಕ ಜೆ.ಮಂಜುನಾಥ್ ಅವರ ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದಾರೆ.
ಇನ್ನೂ ಹೆಸರಿಡದ ಚಿತ್ರ ಸೆಪ್ಟೆಂಬರ್ 15ಕ್ಕೆ ಆರಂಭವಾಗಲಿದೆ. ಸಂಪೂರ್ಣ ಹೊಸಬರ ತಂಡವಾಗಿರುವ ಚಿತ್ರಕ್ಕೆ ರಾಜೇಶ್ ಕುಮಾರ್ ಗುಲೆಚ ಬಂಡವಾಳ ಹಾಕುತ್ತಿದ್ದಾರೆ.
ಚಿತ್ರದ ಕಥೆ ಕೇಳಿದಾಗ ಖುಷಿಯಾಯಿತು. ಇದರಲ್ಲಿ ಡ್ರಾಮಾ, ಮನರಂಜನೆ ಇದೆ. ಈ ಪಾತ್ರಕ್ಕೆ ನಾನು ಸುಲಭವಾಗಿ ಹೊಂದಿಕೆಯಾಗಬಹುದು. ಬೇರೆ ಚಿತ್ರ ನಿರ್ಮಾಪಕರ ಜೊತೆಗೆ ಮಂಜುನಾಥ್ ಅವರ ಕೆಲಸದ ಶೈಲಿಯನ್ನು ನೋಡಿದ್ದೇನೆ. ಈ ಚಿತ್ರಕ್ಕೆ ಅವರು ನಿರ್ದೇಶಕರಾಗಿ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿದೆ ಎಂದು ದಿಗಂತ್ ಹೇಳಿದರು.
 ಇಂದು ಚಿತ್ರಗಳು ಶೂಟಿಂಗ್ ಆರಂಭವಾಗಿ ಅರ್ಧಕ್ಕೆ ನಿಂತುಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ನಟರು ಸಜ್ಜಾಗಿರಬೇಕು. ಉತ್ಸವ್ ಎಂಬ ಚಿತ್ರ ಆರಂಭವಾಗಿ ಅರ್ಧಕ್ಕೆ ನಿಂತ ಅನುಭವ ದಿಗಂತ್ ಅವರಿಗಿದೆ. 
 ಈ ಹೊಸ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ನೀಡಲಿದ್ದಾರೆ.
SCROLL FOR NEXT