ಬೆಂಗಳೂರು: ಮಾಸ್ಟರ್ ಪೀಸ್ ನಲ್ಲಿ ನಟಿಸಿದ್ದ ಶಾನ್ವಿ ಶ್ರೀವಾತ್ಸವ್ ಸಾಹೇಬ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮಾ ಸ್ವಲ್ಪ ತಡವಾಗಿ ರಿಲೀಸ್ ಆಗುತ್ತಿರುವುದರಿಂದ ಸಾಹೇಬ ಚಿತ್ರದ ಬಗ್ಗೆ ಶಾನ್ವಿ ಕುತೂಹಲಭರಿತರಾಗಿದ್ದಾರೆ, ಸಾಹೇಬ ಸರಳ ಕಥೆಯುಳ್ಳ ಶಾಂತಿಯುತ ಸಿನಿಮಾವಾಗಿದೆ, ಹೆಚ್ಚಿನ ಮಸಾಲಾ ಸಿನಿಮಾದಲ್ಲಿಲ್ಲ, ಸರಳ ಸಿನಿಮಾಗಳನ್ನ ಮೆಚ್ಚುವವರಿಗೆ ಸಾಹೇಬ ಸಿನಿಮಾ ಇಷ್ಟವಾಗುತ್ತದೆ ಎಂದು ಶಾನ್ವಿ ಹೇಳಿದ್ದಾರೆ.
ಒಬ್ಬನಟಿಗೆ ಯಾವಾಗಲೂ ಈ ರೀತಿಯ ಕಥಗೆಳು ಸಿಗುವುದಿಲ್ಲ, ಪ್ರಯೋಗಾತ್ಮಕ ಸಿನಿಮಾಗಳಿಗೆ ಸಹಿ ಮಾಡುವುದು ಸ್ವಲ್ಪ ರಿಸ್ಕ್, ವಿಭಿನ್ನ ರೀತಿಯ ಸಿನಿಮಾಗಳು ಯಾವಾಗಲೂ ತುಸು ಕಷ್ಟದ ಕೆಲಸವೇ ಆಗಿರುತ್ತದೆ ಎಂದು ಹೇಳಿದ್ದಾರೆ,
ಇಂದಿನ ದಿನಗಳಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರ ಅಭಿರುಚಿ ಬಗ್ಗೆ ನಾವು ನಿರೀಕ್ಷಿಸಲು ಸಾಧ್ಯವಿಲ್ಲ, ಮಾಸ್ ಪ್ರೇಕ್ಷಕರಿಗೂ ಕೂಡ ಸಾಹೇಬ ಸಿನಿಮಾ ಇಷ್ಟವಾಗುತ್ತದೆ. ಪ್ರಸಿದ್ಧ ನಟರುಗಳ ಜೊತೆ ನಟಿಸಿರುವ ಶಾನ್ವಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿರುವ ಮನೋರಂಜನ್ ಜತೆ ಅಭಿನಯಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಮನೋರಂಜನ್ ಹೊಸಬರು ಎಂದು ಹೇಳುತ್ತಾರೆ, ಆದರೆ ಅವರಿಗೆ ಇಂಡಸ್ಟ್ರಿಯ ಬಗ್ಗೆ ಪೂರ್ಣ ಪರಿಚಯವಿದೆ, ನಟಿ ಖುಷ್ಬೂ ವಯಕ್ತಿಕವಾಗಿ ಮನೋರಂಜನ್ ಸಿನಿಮಾಗೆ ತಮ್ಮ ಶುಭ ಹಾರೈಕೆ ತಿಳಿಸಿದ್ದಾರೆ, ಶೂಟಿಂಗ್ ವೇಳೆ ಮನೋರಂಜನ್ ಮುಂದೆ ನಾನೇ ಹೊಸಬಳ ರೀತಿ ಅನಿಸುತ್ತಿತ್ತು. ಅವರ ನಟನೆ ಹಾಗೂ ನಮ್ಮ ಸುತ್ತಮುತ್ತಲಿರುವವರು ನೀಡುವ ಸಲಹೆಗಳನ್ನು ಸ್ವೀಕರಿಸುವ ರೀತಿ ಅವರು ನಟನಾ ವೃತ್ತಿಗೆ ಹೊಸಬರು ಎಂದು ಅನ್ನಿಸುವುದಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ ಕುಟುಂಬದಿಂದ ಬಂದಿರುವ ಅವರಿಗೆ ಎಲ್ಲಾ ಕೆಲಸವೂ ತಿಳಿದಿದೆ, ಹಿನ್ನೆಲೆ ಏನೇ ಇದ್ದರೂ ಅವರ ಪ್ರತಿಭೆ ಅವರ ಸಿನಿಮಾ ಯಶಸ್ಸನ್ನು ನಿರ್ಧರಿಸುತ್ತದೆ ಮನೋರಂಜನ್ ಒಳ್ಳೆಯ ಮನಸ್ಸಿನ ವ್ಯಕ್ತಿ. ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ನನಗೆ ತೃಪ್ತಿಯಿದೆ. ಸಿನಿಮಾ ನೋಡಿದವರು ಬೇಸರದಿಂದ ವಾಪಾಸಗುವ ಪ್ರಶ್ನೆಯೇ ಇಲ್ಲ, ಇಷ್ಟವಾಗದಂತದ್ದು ಸಿನಿಮಾದಲ್ಲಿ ಯಾವುದು ಇಲ್ಲ, ಇದು ನನ್ನ ಪ್ರಾಮಾಣಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಮನೋರಂಜನ್ ಅವರ ತಂದೆಯನ್ನು ನಾನು ಭೇಟಿಯಾಗಿದ್ದೇನೆ, ಎಲ್ಲಾ ಹುಡುಗಿಯರನ್ನು ಗೆಲ್ಲುವ ಮೋಡಿ ಅವರಿಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos